ಸಂಪಾದಕೀಯ
ಕನಕಗಿರಿ ತಾಲೂಕಿನಲ್ಲಿ ಬಾಲ ಮಕ್ಕಳಿಂದ ರಾಧೆ ಕೃಷ್ಣರ ವೇಷ ಭೂಷಣ..
ಕನಕಗಿರಿ ತಾಲೂಕಿನಲ್ಲಿ ಬಾಲ ಮಕ್ಕಳಿಂದ ರಾಧೆ ಕೃಷ್ಣರ ವೇಷ ಭೂಷಣ
ಪಟ್ಟಣದ ಅಳವಡಿ ಮಕ್ಕಳನ್ನು ಶ್ರೀ ಕೃಷ್ಣ ರಾಧೆಯಂತೆ ಶೃಂಗರಸಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಿಹಿ ಹಂಚುವ ಮೂಲಕ ಆಚರಿಸಲಾಯಿತು ಅದೇ ರೀತಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಶ್ರೀಕಾಂತ್ ಅವರ ಪುತ್ರ ಪುತ್ರಿಯಾದ ಚಿರಾಗ್ ಹಾಗೂ ಚಾರ್ವಿ ರಾಧೆ ಕೃಷ್ಣರ ವೇಷ ಭೂಷಣವನ್ನು ಹಾಕಿ ಸಂಭ್ರಮ ಆಚರಣೆ ಕುಟುಂಬ ವಸ್ತ್ರರೊಂದಿಗೆ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು ಶ್ರೀ ಕೃಷ್ಣನ ಜನ್ಮಾಷ್ಟಮಿಯು ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



