ನಿಶ್ಚಿತ ಪಿಂಚಣಿ ನಮ್ಮ ಹಕ್ಕು…ಪಿಂಚಣಿ ವಂಚಿತ ನೌಕರರ ಸಂಘ.
ನಿಶ್ಚಿತ ಪಿಂಚಣಿ ನಮ್ಮ ಹಕ್ಕು
ಕನಕಗಿರಿ ಪಟ್ಟಣದ ತಹಸಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಶಿವಯೋಗಿ ಚೆನ್ನಮಲ್ಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರು ರುದ್ರ ಸ್ವಾಮಿ ಪ್ರೌಢಶಾಲೆ ಮತ್ತು ಅಂಜುಮನ್ ಉರ್ದು ಶಾಲೆಯ ಶಿಕ್ಷಕ ಸಿಬ್ಬಂದಿಗಳು ಸೇರಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ,ರಾಜ್ಯ ಘಟಕ,ಬೆಂಗಳೂರು.* ಇವರ ಆದೇಶದಂತೆ ಶನಿವಾರ, *ಕೊಪ್ಪಳ ಜಿಲ್ಲೇಯ, “ಕನಕಗಿರಿ” ತಾಲೂಕಿನ ಮಾನ್ಯ ಗ್ರೇಡ್ -2. ತಹಶೀಲ್ದಾರ ವಿ ಎಚ್ ಹೊರಪೇಟೆ ರವರ ಮುಖಾಂತರ *” ಮಾನ್ಯ ಮುಖ್ಯಮಂತ್ರಿಗಳಿಗೆ”* •ಹಳೆಯ ನಿಶ್ಚಿತ ಪಿಂಚಣಿ ಯೋಜನೆ• ಯನ್ನು ಜಾರಿಗೊಳಿಸುವುದು,2014 ವಿಧೇಯಕದ ಪರಿಷ್ಕರಣೆ/ರದ್ದತಿ, ಮತ್ತು ಅನುದಾನಿತ ನೌಕರರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾಧರ ಗದ್ದಿ ಶಶಿಕಲಾ ಮಂಗಳ ಸಜ್ಜನ್ ಮಲ್ಲಿಕಾರ್ಜುನ್ ಭಾವಿಕಟ್ಟಿ ದುರುಗೇಶ ಮಹಮ್ಮದ್ ರಫಿ ವಿಜಯಲಕ್ಷ್ಮಿ ರಮೇಶ್ ಕರೇಗೌಡ ಶಿವಾರೆಡ್ಡಿ ಬಸವರಾಜ್ ರವಿಕುಮಾರ್ ಮೌನೇಶ್ವರ ಅಬ್ದುಲ್ ಖಾದ್ರಿ
ಚೇತನ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಗಂಗಾವತಿ ತಾಲೂಕಿನ ವರದಿಗಾರ



