ಸಂಪಾದಕೀಯ
ಬಾಲರಾಮನನ್ನು ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ, ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ ಪೂಜೆ. ಕಕ್ಕೇರ ಪಟ್ಟಣ.

ಇಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನಾ ಹಾಗೂ ಬಾಲರಾಮನನ್ನು ಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ಕಕ್ಕೇರ ಪಟ್ಟಣದಲ್ಲಿ ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ನೆರವೇರಿಸಿದರು ಹಾಗೂ ಪಟ್ಟಣದ ಮುಖ್ಯ ಹೆದ್ದಾರಿ ಸರಕಲ್ಲಿನಲ್ಲಿರುವ ಶ್ರೀ ಗುರು ಆದಿಕವಿ ಮಹಾಋಷಿ ವಾಲ್ಮೀಕಿ ಪುತ್ತಳಿಗೆ ಹಾಲಿನ ಅಭಿಷೇಕ ಜೈ ಶ್ರೀ ರಾಮ ಎಂಬ ಘೋಷಣೆಯೊಂದಿಗೆ ಪೂಜೆ ನೆರವೇರಿಸಿದರು, ಜನವರಿ 22 2024 ರಂದು ಭಾರತೀಯರಿಗೆ 500 ವರ್ಷದ ಹೋರಾಟದ ಪ್ರತಿಫಲವಾಗಿ ಹಿಂದುಗಳಿಗೆ ಸಿಕ್ಕ ಜಯ ಪ್ರತಿ ಮನೆಯಲ್ಲಿ 5 ದೀಪಗಳನ್ನು ಹಚ್ಚಿ ಹಬ್ಬದಂತೆ ಆಚರಿಸಿ ಜೈ ಶ್ರೀ ರಾಮ್ ಜೈ ಶ್ರೀರಾಮ್ ಎಂದು ಘೋಷಣೆ ಹೇಳುತ್ತಾ ಶ್ರೀ ರಾಮನಿಗೆ ಭಕ್ತಿ ಪೂರ್ವಕದಿಂದ ಪೂಜ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಸಂಘಟನಾ ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು,
ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು




