ಬೆಂಗಳೂರುನಗರ ಛಿದ್ರ, ಛಿದ್ರ ಮಾಡಬೇಡಿ-ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ

ಗ್ರೆಟರ್ ಬೆಂಗಳೂರು ಮಸೂದೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ, ಬೆಂಗಳೂರುನಗರ ಛಿದ್ರ, ಛಿದ್ರ ಮಾಡಬೇಡಿ-ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ
ಬೆಂಗಳೂರು:ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕರಾದ ಪದ್ಮನಾಭರೆಡ್ಡಿರವರು ಗ್ರೆಟರ್ ಬೆಂಗಳೂರು ಬಗ್ಗೆ ಸಾಧಕ, ಭಾದಕಗಳ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪದ್ಮನಾಭರೆಡ್ಡಿರವರು ಮಾತನಾಡಿ ರಾಜ್ಯ ಸರ್ಕಾರ ಗ್ರೆಟರ್ ಬೆಂಗಳೂರು ರಚನೆ ಮಾಡಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಸಮಿತಿ ಸಹ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಗ್ರೆಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲು ಅವಕಾಶವಿದ್ದಿಯ..
ಮುಖ್ಯಮಂತ್ರಿಗಳು ಸಹ ಕಾನೂನು ಪದವಿ ಪಡೆದವರು, ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ.
ರಾಜ್ಯ ಸರ್ಕಾರ ಅರ್ಟಿಕಲ್ 243ರ ಪ್ರಕಾರ ಪಾಲಿಕೆ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಬೆಂಗಳೂರುನಗರ ಛಿದ್ರ, ಛಿದ್ರ ಮಾಡುವುದು ಬೇಡ, ಸಂವಿಧಾನದ ಪ್ರಕಾರ ಬೆಂಗಳೂರುನಗರ ವಿಂಗಡನೆ ಮಾಡಲು ಅವಕಾಶವನ್ನು ರಾಜ್ಯ ಸರ್ಕಾರ ಪಡೆದಿದೆ.
ಗ್ರೆಟರ್ ಬೆಂಗಳೂರು ರಚನೆ ನಿಯಾಮವಳಿ ಹಳೆಯ ಬಿಬಿಎಂಪಿ ನಿಯಾಮವಳಿ ಸಹ ಒಂದೇ ಆಗಿದೆ ಯಾವುದೇ ಬದಲಾವಣೆ ಇಲ್ಲ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಂಗಡನೆ ಮಾಡಬೇಡಿ ಒಂದು ಕಡೆ ತೆರಿಗೆ ಹೆಚ್ಚಳ ಇನ್ನೂಂದು ಕಡೆ ತೆರಿಗೆ ಸಂಗ್ರಹ ಕಡಿಮೆ ಬರುತ್ತದೆ ಪಾಲಿಕೆ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ವ್ಯತ್ಯಾಸ ಆಗಬಹುದು ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆ.
ಅನ್ಯ ಭಾಷಿಗರಿಗೆ ಪಾಲಿಕೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ . ಓಟ್ ಬ್ಯಾಂಕ್ ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ಕುತಂತ್ರ ಮಾಡುತ್ತಿದೆ.
ಬಿ.ಎಸ್.ಪಾಟೀಲ್, ಸಿದ್ದಯ್ಯ, ರವೀಂದ್ರನ್ ಸಮಿತಿ ನೀಡಿರುವ ವರದಿಯಲ್ಲಿ ಲಂಡನ್ ಮಾದರಿ ಆಡಳಿತ ಬೆಂಗಳೂರಿನಲ್ಲಿ ತರುತ್ತೇವೆ ಎಂದು ಹೇಳಿದ್ದರು, ಲಂಡನ್ ನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚಿನ ಅಧಿಕಾರ ನೀಡಿದ್ದಾರೆ ಅದರೆ ಗ್ರೆಟರ್ ಬೆಂಗಳೂರು ವರದಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಕಡಿತ ಮಾಡಿದ್ದಾರೆ.
1ರಿಂ10ಪಾಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ ಯಾವ ಸಂವಿಧಾನ ಆನ್ವಯ ಮಾಡುತ್ತಿರ ಎಂದು ಸರ್ಕಾರ ತಿಳಿಸಬೇಕು.
5ವರ್ಷಕ್ಕೊಮ್ಮೆ ಹೊಸ ಸರ್ಕಾರ ಬಂದ ನಂತರ ಬಿಬಿಎಂಪಿ ಯಲ್ಲಿ ನಿಯಾಮವಳಿ ಬದಲಾವಣೆಯಾಗುತ್ತಿದೆ ಇದರಿಂದ ಆಡಳಿತ ಅಭಿವೃದ್ದಿ ಕುಂಠಿತವಾಗುತ್ತದೆ.
ಬೆಂಗಳೂರುನಗರ ಬಿಜೆಪಿ ಭದ್ರಕೋಟೆ ಎಂಬ ತಿಳಿದ ಕಾಂಗ್ರೆಸ್ ಪಕ್ಷ ಶಾಸಕರಿಗೆ ಬಿಬಿಎಂಪಿಯಲ್ಲಿ ಮತದಾನ ಮಾಡುವ ಹಕ್ಕು ಕೊಟ್ಟಿಲ್ಲ.
ಗ್ರೆಟರ್ ಬೆಂಗಳೂರು ಮಸೂದೆ ಜಾರಿಗೆ ತರಲು ಸರ್ಕಾರಕ್ಕೆ ಅವಕಾಶವಿಲ್ಲ.
ಬಿಬಿಎಂಪಿ ಚುನಾವಣೆ ಮಾಡಬೇಡಿ ಎಂದು ಯಾವ ನ್ಯಾಯಲಯ ಹೇಳಿಲ್ಲ ಅದರು ಸರ್ಕಾರ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ.
ಮೀಸಲಾತಿ ಮಾಡಿದರೆ ಸಾಕು ಚುನಾವಣೆ ಮಾಡಬಹುದು ಅದರು ಕಾಂಗ್ರೆಸ್ ಸರ್ಕಾರ ನ್ಯಾಯಲಯದಲ್ಲಿ ಕೇಸ್ ಇದೆ ಸುಳ್ಳು ಹೇಳುತ್ತಿದೆ.
ಗ್ರೆಟರ್ ಬೆಂಗಳೂರು ಮಸೂದೆ ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು, ಸಂಪುಟದಲ್ಲಿ ನಿರ್ಣಯ ಮಾಡಿ ಕಳುಹಿಸಿದರು ರಾಜ್ಯಪಾಲರು ಸಂವಿಧಾನ ವಿರೋಧಿ ಮಸೂದೆಯನ್ನು ತಿರಸ್ಕಾರ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.




