ಸಂಪಾದಕೀಯ
ಇದು ರೈತಪರ ವಿರೋಧಿ ಬಜೆಟ್ . ಹಗರಟಗಿ

ಇದು ರೈತಪರ ವಿರೋಧಿ ಬಜೆಟ್ . ಹಗರಟಗಿ
ಯಾದಗಿರಿ. ಕೇಂದ್ರ ಸರ್ಕಾರದ ಬಜೆಟ್ ರೈತರ ಪರ ವಿರೋಧಿ ಬಜೆಟ್ ಇದಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಆರೋಪಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹಲವಾರು ತಾಲೂಕುಗಳಲ್ಲಿ ಬರಗಾಲದಿಂದ ಕೂಡಿವೆ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಮತ್ತು ನೀರಾವರಿ ಹಾಗೂ ರೈತರು ಬೆಳೆದ ಬೆಂಬಲ ಬೆಂಬಲ ಬೆಲೆ ಘೋಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಸ್ವಾಮಿನಾಥನ್ ಆಯೋಗದ ವರದಿ ಕೂಡ ಜಾರಿ ಮಾಡಿಲ್ಲ ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಯಾವುದೇ ರೀತಿಯಾದ ಅನುದಾನ ಒದಗಿಸಿಲ್ಲ ಇದರಿಂದ ರೈತರಿಗೆ ತುಂಬಾ ಆನ್ಯಯವಾಗಿದೆ ಇದು ಕಾರ್ಪೊರೇಟುಗಳು ಉದ್ಯಮಿಗಳ ಬಜೆಟ್ ಆಗಿದೆ ಎಂದು ರಾಜ್ಯ ರೈತ ಸಂಘದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ




