” ಜೈ ಜಗಜೀವನ್ ಬಿ. ಆರ್. ಅಂಬೇಡ್ಕರ್ ರಾಷ್ಟ್ರ ಪಕ್ಷ” ಎಂಬ ಹೆಸರಿನ ಪಕ್ಷ ಸ್ಥಾಪನೆ. ಶಂಕರ್ ಕೊಡ್ಲಾ. Kalaburgi/ ಬೆಂಗಳೂರು.
ಶ್ರೀ ಶಂಕರ್ ಕೊಡ್ಲಾ ಎಂ.ಡಿ. S. S. V. T. V.ಚಾನೆಲ್ ಕಲಬುರ್ಗಿ ಮತ್ತು ಸಂಪಾದಕರು ಜೈ ಭೀಮ ಗದೆ ಕಲಬುರಗಿ ಮತ್ತು ಬೆಂಗಳೂರು ಆವೃತ್ತಿ.. ಇವರ ನೇತೃತ್ವದಲ್ಲಿ ಸಮಾನ ಮನಸ್ಕರು ಸೇರಿಕೊಂಡು ಇಂದಿನ ಸಮಾಜದಲ್ಲಿ ಸಾರ್ವಜನಿಕರ ಸಮಸ್ಯೆಗಳು, ತೊಂದರೆ ಆಗುತ್ತಿರುವುದನ್ನು ಮನಗಂಡು
ಈ ವಿಚಾರವಾಗಿ ಈಗಿನ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲಾರದೇ ಜಾಣ ಕುರುಡು ತೋರಿಸುತ್ತಾ ನಿದ್ರೆಯಲ್ಲಿ ಮುಳುಗಿವೆ. ಇದರಿಂದಾಗಿ ಸಮಾಜದ ಎಲ್ಲಾ ವರ್ಗದ ಜನರು ತುಂಬಾ ನಿರಾಶರಾಗಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಕಷ್ಟಪಡುತ್ತಿದ್ದಾರೆ. ಈ ವಿಷಯವನ್ನು ಅರಿತ ಶಂಕರ್ ಕೊಡ್ಲಾ ಮತ್ತು ಸಮಾನ ಮನಸ್ಕರು ಒಂದೆಡೆ ಸೇರಿಕೊಂಡು ರಾಷ್ಟ್ರೀಯ ಪಕ್ಷ ಸ್ಥಾಪಿಸಿ, ಜನಸಾಮಾನ್ಯರ ಕಷ್ಟ, ಸಮಸ್ಯೆ, ಗೋಳು ಪರಿಹರಿಸಲು ಮುಂದಾಗಿದ್ದಾರೆ. ಈ ವಿಚಾರವಾಗಿ ” ಜೈ ಜಗಜೀವನ್ ಬಿ. ಆರ್. ಅಂಬೇಡ್ಕರ್ ರಾಷ್ಟ್ರ ಪಕ್ಷ” ಎಂಬ ಹೆಸರಿನ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ದಿನಾಂಕ 27 ಆಗಸ್ಟ್ 2026ರಂದು ಬೆಳಗ್ಗೆ ಬೆಂಗಳೂರು ಮಹಾನಗರದ ಗಾಂಧಿನಗರದ ಕಾನಿಷ್ಕ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ಕರೆದು ಪಕ್ಷದ ಸಾಧ್ಯತೆ ಬಾದ್ಯತೆಗಳ ಬಗ್ಗೆ ಚರ್ಚೆ ಮತ್ತು ಸಲಹೆ ಸೂಚನೆಗಳಿಗಾಗಿ ಎಲ್ಲಾ ಪತ್ರಿಕಾ ಸಂಪಾದಕರಿಗೂ ಮತ್ತು ಪತ್ರಿಕ ಹಿರಿಯ ವರದಿಗಾರರಿಗೂ ಆಹ್ವಾನಿಸಿದ್ದಾರೆ ತಾವೆಲ್ಲರೂ ಈ ವಿಷಯವನ್ನು ಅರಿತು 27/08/2026 ರಂದು ಕಾನಿಷ್ಕ ಹೋಟೆಲ್ನಲ್ಲಿ ಏರ್ಪಡಿಸಿರುವ
ಪತ್ರಿಕಾಗೋಷ್ಠಿಗೆ ಹಾಜರಾಗಲು ಆಹ್ವಾನಿಸಲಾಗಿದೆ.



