ಸಂಪಾದಕೀಯ
ನಿವೇದಿತಾ ಬೆನಾಲ್ ಮತ್ತು ಕುಮಾರಿ ಸುಧಾ ಪಟ್ಟಣಶೆಟ್ಟಿ ಸಿವಿಲ್ ನ್ಯಾಯಾಧೀಶರುಗಳಾಗಿ ನೇಮಕವಾಗಿದ್ದು ಕಾನೂನು ಸನ್ಮಾನ. B

ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಧಾರವಾಡ ದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು, ಸದರಿ ಕಾನೂನು ಮಹಾವಿದ್ಯಾಲಯದ 2024 ಸಾಲಿನ ವಿದ್ಯಾರ್ಥಿನಿಯರಾದ ಕುಮಾರಿ ನಿವೇದಿತಾ ಬೆನಾಲ್ ಮತ್ತು ಕುಮಾರಿ ಸುಧಾ ಪಟ್ಟಣಶೆಟ್ಟಿ ಸಿವಿಲ್ ನ್ಯಾಯಾಧೀಶರುಗಳಾಗಿ ನೇಮಕವಾಗಿದ್ದು ಕಾನೂನು ಮಹಾವಿದ್ಯಾಲಯದಲ್ಲಿ ಅವರುಗಳಿಗೆ ಸನ್ಮಾನವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ನ್ಯಾಯಾಧೀಶರಾದ ಗೌರವಾನ್ವಿತ ಬಿಎಸ್ ಭಾರತಿ ಆಗಮಿಸಿದ್ದರು. ಚೇರ್ಮನ್ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ವಿ ಡಿ ಕಾಮರೆಡ್ಡಿ, ಶ್ರೀ ರಾಬರ್ಟ್ ದದ್ದಾಪುರಿ ಸಿಂಡಿಕೇಟ್ ಸದಸ್ಯರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ & ಗವರ್ನಿಂಗ್ ಕೌನ್ಸಿಲ್ ಮೆಂಬರ್ ಸರ್ ಸಿದ್ದಪ್ಪ ಕಾನೂನು ಮಹಾವಿದ್ಯಾಲಯ ಧಾರವಾಡ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ Dr ಎಸ್ಆರ್ ಮಂಜುಳಾ ಉಪಸ್ಥಿತರಿದ್ದರು. ನೂತನ ನ್ಯಾಯಾಧೀಶರುಗಳಿಗೆ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.







