ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ 8800002024 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ : ಸಣ್ಣ ಕನಕಪ್ಪ
*ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಕಾರ್ಯಕ್ರಮವನ್ನು *8800002024 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ:ಸಣ್ಣ ಕನಕಪ್ಪ*
ಕನಕಗಿರಿ ತಾಲೂಕಿನ ಬಿಜೆಪಿ ಕಛೇರಿಯಲ್ಲಿ ಇಂದು ಪಾಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ಕನಕಪ್ಪ ಅವರು ನಮ್ಮ ದೇಶದ ಜನ ಮೆಚ್ಚಿದ ಗೌರಾನ್ವಿತ ಹಾಗೂ ಜನಪ್ರಿಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ರವರು ಬೆಳಗ್ಗೆ ಸರಿಯಾಗಿ 11 ಗಂಟೆಗೆ ಸೋಮುವಾರ ಬಿಜೆಪಿ ಸದಸ್ಯತ್ವ ಅಭಿಯಾನದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರ ಕಾರ್ಯಕ್ರಮವನ್ನು 8800002024 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವುದರ ಮುಖಾಂತರ ದೇಶಾದ್ಯಂತ ಚಾಲನೆಯನ್ನು ನೀಡಲಿದ್ದಾರೆ, ಅದೇ ರೀತಿ ರಾಜ್ಯ ಬಿಜೆಪಿ ಅಧ್ಯಕ್ಷರ ದ ವಿಜಯಾಂದ್ರ ಅವರ ಸಂಕಲ್ಪ ಮಾಡಿ ನಮ್ಮ ರಾಜ್ಯ ದಲ್ಲಿಯೂ ಸುಮಾರು ಒಂದು ದಿನದಲ್ಲಿ ಎರಡು ಕೋಟಿ ಜನರನ್ನು ಸದಸ್ಯತ್ವ ಮಾಡಬೇಕು ಎಂಬ ಕಾರಣಕ್ಕಾಗಿ ಕನಕಗಿರಿಯ ಲ್ಲಿ ಸುಮಾರು 80000 ಸಾವಿರ ಜನರನ್ನು ಸದಸ್ಯತ್ವ ಮಾಡಬೇಕು ಮತ್ತು
ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ಮಂಥೇಶ್ ಸಜ್ಜನ್ ಅವರು ಹೇಳಿದರು ಬಿಜೆಪಿ ಇಂದ ಒಂದು ವ್ಯವಸ್ಥೆ ,
ಒಂದು ಸಿದ್ಧಾಂತ, ಒಂದು ಸಂಘಟನೆ ಹಾಗೂ ಬಿಜೆಪಿಯೆಂದರೇ ಒಂದು ಚಳುವಳಿ.
ಎಂಬ ವೇದವಾಕ್ಯದೊಂದಿಗೆ ನಾಳೆ
ಸೆಪ್ಟೆಂಬರ್ 5 ಗುರುವಾರ 2024ರಿಂದ ಆರಂಭವಾಗುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ. 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಪಾಲುದಾರರಾಗೋಣ ಎಂದು ಮಂತೆಶ್ ಸಜ್ಜನ್ ಮಾತನಾಡಿದರು.
ಈ ಸಂದರ್ಬದಲ್ಲಿ ಮಾಜಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಸಜ್ಜನ್ ಎಸ್ ಸಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ ಮಂಡಲ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ನಾಯಕ್ ಶಿವಕುಮಾರ್ ಹಳ್ಳಿಕೇರಿ ರಂಗಪ್ಪ ಕೊರಘಟಗಿ ಹನುಮೇಶ್ ಯಲಬುರ್ಗಿ ಶಿವಕುಮಾರ್ ಕೋರಿ ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



