ಸುರಪುರ ವಿಧಾನಸಭಾ ಉಪ-ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಗುಂಡಪ್ಪ ಜೆ ಬೋಗಿ ಬೈಲಕುಂಟಿ ಇವರು ನಾಮಪತ್ರ ಸಲ್ಲಿಕೆ.
ದಿನಾಂಕ/19/4/2024 ರಂದು ಪಕ್ಷೇತರ ಅಭ್ಯರ್ಥಿಯಾದ ಗುಂಡಪ್ಪ ಜೆ ಬೋಗಿ ಬೈಲಕುಂಟಿ ಇವರು ತಾಯಿ ಪತ್ನಿ ಹಾಗೂ ಆತ್ಮೀಯ ಬಂಧುಗಳು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು
ಮೇ 7 ರಂದು ಸುರಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕುಟುಂಬ ಸಮೇತ ನಾಮಪತ್ರ ಸಲ್ಲಿಸಲಾಯಿತು ನಾಮಪತ್ರ ಸಲ್ಲಿಸಿ ಮಾತನಾಡಿದ ಸುರಪೂರ ಮತ ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಸಮಸ್ಯೆಗಳಿದ್ದು ನಮ್ಮ ಕ್ಷೇತ್ರದಲ್ಲಿ ಹೆಚ್ಚು ರೈತಾಪಿಗಳಿದ್ದು ಹಾಗೂ ಕೂಲಿ ಕಾರ್ಮಿಕರಿರುವುದರಿಂದ ಈ ವರ್ಷ ಮಳೆ ಇಲ್ಲದೆ ಬರಗಾಲ ಬಿದ್ದಿದ್ದು ಇಲ್ಲಿಯವರೆಗೆ ರೈತರಿಗೆ ಸರ್ಕಾರದಿಂದ ಯಾವುದೇ ಬರ ಪರಿಹಾರ ಕೊಟ್ಟಿರುವುದಿಲ್ಲ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗದೇ ವಂಚಿತರಾಗಿದ್ದು ಇಲ್ಲಿಯವರೆಗೆ ಯಾವ ಸರಕಾರವು ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿರುವುದಿಲ್ಲ ಇನ್ನು ಮುಂದಿನ ದಿನಗಳಲ್ಲಿ ಸರಕಾರ ಈ ಸಮಸ್ಯೆಕ್ಕೆ ನ್ಯಾಯ ನೀಡಬೇಕು ಹಾಗೂ ನಮ್ಮ ಕ್ಷೇತ್ರದ ರೈತರಿಗೆ ಇಂಗಾರಿ ಬೆಳೆಗೆ ನೀರು ಬಿಡದೆ ಇರುವ ಕಾರಣದಿಂದ ಇವತ್ತು ದುಡಿಯಲು ಬೆಂಗಳೂರು ಹಾಗೂ ಬೇರೆಬೇರೆ ರಾಜ್ಯಕ್ಕೆ ಜನ ಹೋಗಿದ್ದಾರೆ ಇವತ್ತಿನ ಸರಕಾರ ರೈತರಿಗೆ ವಾರ ಬಂದಿ ಮಾಡಿ ನೀರು ಬಿಡಬಹುದಿತ್ತು ಆದರೆ ನಮಗೆ ಬಿಡಬೇಕಾದ ನೀರು ಬಿಡದೆ ಇರುವುದರಿಂದ ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ನ್ಯಾಯ ಬದ್ಧವಾಗಿ ನನ್ನ ಕ್ಷೇತ್ರಕ್ಕೆ ನ್ಯಾಯ ಒದಿಗಿಸುತ್ತೇನೆ ಹಾಗೂ ಪ್ರಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು,




