ಜಿಬಿಎ ಚುನಾವಣೆ; ನಮ್ಮ ಮೊದಲು ಆದ್ಯತೆ ಬೆಂಗಳೂರು ನವನಿರ್ಮಾಣ ಪಕ್ಷ ಸ್ಪರ್ದೆ.ಅಧ್ಯಕ್ಷ ಶ್ರೀ ಕಾಂತ್ ನರಸಿಂಹನ್

ಜಿಬಿಎ ಚುನಾವಣೆ; ನಮ್ಮ ಮೊದಲು ಆದ್ಯತೆ ಬೆಂಗಳೂರು ನವನಿರ್ಮಾಣ ಪಕ್ಷ ಸ್ಪರ್ದೆ.ಅಧ್ಯಕ್ಷ ಶ್ರೀ ಕಾಂತ್ ನರಸಿಂಹನ್
ಬೆಂಗಳೂರುಜನವರಿ 17 – ಜಿಬಿಎ ಚುನಾವಣೆ; ನಮ್ಮ ಮೊದಲು ಆದ್ಯತೆ ಬೆಂಗಳೂರು ನವನಿರ್ಮಾಣ ಪಕ್ಷ ಸ್ಪರ್ದೆ.ಅಧ್ಯಕ್ಷ ಶ್ರೀ ಕಾಂತ್ ನರಸಿಂಹನ್ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. ಬೆಂಗಳೂರು ನವ ನಿರ್ಮಾಣ ರಾಜಕೀಯ ಪಕ್ಷ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ 100ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲಿದೆ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷದ ಅಧ್ಯಕ್ಷ ಶ್ರೀ ಕಾಂತ್ ನರಸಿಂಹನ್ ಹೇಳಿದರು.
ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಬೆಂಗಳೂರು ನಿರ್ಮಾಣ ಕ್ಕಾಗಿ ಜಿಬಿಎ ಚುನಾವಣೆಯಲ್ಲಿ ಸ್ಪರ್ದೆ ಮಾಡಲಾಗುವುದು,ಕನಿಷ್ಠ ಐವತ್ತಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಲಾಗಿದೆ.ಚುನಾವಣೆಯಲ್ಲಿ ಗೆಲ್ಲುವಿನ ಬಳಿಕ ಪ್ರತಿ ವಾರ್ಡಿನಲ್ಲಿ ಜನಸಭೆ ಮೂಲಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
100 ವಾರ್ಡ್ ಗಳಲ್ಲಿ ಜಿಬಿಎ ಚುನಾವಣೆಯಲ್ಲಿ ತಯಾರಿ ನಡೆಸಲಾಗಿದ್ದು.ಎಲ್ಲ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದರು . .ಚುನಾವಣೆಯಲ್ಲಿ ಯಾವುದೇ ಮತಗಳನ್ನು ಪಡೆಯಲು ಹಣ,ಹಂಚುವಂತ ಚುನಾವಣಾ ದುರುಪಯೋಗ ಮಾಡದೇ ಪಾರದರ್ಶಕವಾಗಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



