ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೊಂದೇ ಕೆಲಸಗಳು ಹೊರಬಿಳುತ್ತಿದೆ

2015 ಅನ್ಸುತ್ತೆ ವಿಧಾನಸೌಧದ ಬಲ ಗೇಟ್ ಹತ್ತಿರ ಒಂದು ಕವರ್ ಅಲ್ಲಿ ಫೈಲ್ ಇಟ್ಕೊಂಡ್,ಒಬ್ಬ ಪೌರ ಕಾರ್ಮಿಕ ಮಹಿಳೆ ನಿಂತಿರುತ್ತಾರೆ,
ಸಿದ್ಧರಾಮಯ್ಯ ಅವರ ಕಾನ್ವೋಯ್ ಬರುತ್ತೆ, ಎಲ್ಲರನ್ನೂ ಸೈಡ್ ಮಾಡ್ತಾ ಇರ್ತಾರೆ, ಈ ಮಹಿಳೆಯನ್ನು ಗಮನಿಸಿದ ಸಿದ್ದರಾಮಯ್ಯ ಅವರು security ಗೆ ಹೇಳಿ ಅವರನ್ನು ಒಳಗೆ ಕಳುಹಿಸಿ ಅಂತೇಳಿ ಮುಂದೆ ಹೋಗ್ತಾರೆ, ಅದನ್ನು ಗಮನಿಸಿದ
ಲಕ್ಷ್ಮೀ ಹೆಬ್ಬಾಳ್ಕರ್ ಕಾರಲ್ಲಿ ಅವರನ್ನು ಕೂರಿಸಿಕೊಂಡು ಒಳ ಬಾಗಿಲ ಹತ್ರ ಬರ್ತಾರೆ, ಸಿದ್ದರಾಮಯ್ಯ ಇಳಿದ ತಕ್ಷಣ ಈ ಮಹಿಳೆ ಹತ್ರ ಬಂದು, ಅವರ ಶೈಲಿ ಅಲ್ಲಿ ಏನಮ್ಮ ಅಂತ ಕೇಳುತ್ತಾರೆ?
ಆ ಮಹಿಳೆಗೆ ಹೃದಯರೋಗದ ಆಪರೇಷನ್ ಆಗಬೇಕಿರುತ್ತದೆ, ಕೆಲವು ತೊಂದರೆಗಳಿಂದ ಅವ್ರಿಗೆ ರೇಷನ್ ಕಾರ್ಡ್ ಕೊಟ್ಟಿರುವುದಿಲ್ಲ. ಇದಕ್ಕೆ ಮರುಗಿದ ಸಿದ್ದರಾಮಯ್ಯ ಆಗಿಂದಾಗೆ ಜಯದೇವಗೆ ಕರೆ ಮಾಡಿಸಿ ಇವ್ರಿಗೆ ಆಪರೇಷನ್ ಮಾಡುವಂತೆ ಸೂಚಿಸುತ್ತಾರೆ.
ಇದನ್ನು ಮನದಲ್ಲಿಟ್ಟುಕೊಂಡ ಅವರು 2016ನೆ ಬಡ್ಜೆಟ್ ಅಲ್ಲಿ ಪೌರಕಾರ್ಮಿಕ ಹೃದಯರೋಗ ಸ್ಟಂಟ್ಸ್ ಹಾಗೂ ಶಸ್ತ್ರ ಚಿಕಿತ್ಸೆಗೆ 100 ಕೋಟಿ ಎತ್ತಿಟ್ಟು ಮಾನವೀಯತೆ ಮೆರೆಯುತ್ತಾರೆ. ಅಂದಿಂದ ಇಂದಿನವರೆಗೆ ಈಗಲೂ ಪೌರಕಾರ್ಮಿಕ ಹೃದ್ರೋಗ ಸಮಸ್ಯೆಗೆ ಸರ್ಕಾರವೇ ಆ ಹಣ ನೀಡುತ್ತದೆ.
ಇಂತಹ ಅನೇಕ ಸಂಗತಿಗಳು ಅವರನ್ನು ಇಷ್ಟ ಪಡುವಂತೆ ಮಾಡುತ್ತದೆ.
ಅದಕ್ಕೆ ಅವರನ್ನು ಸಾಮಾನ್ಯರು, ದೀನ ದಲಿತರು ಇಷ್ಟ ಪಡೋದು.
ಬಾವಿ ಕಪ್ಪೆಯಂತೆ ಇರುವ ಅನೇಕರಿಗೆ , ಮೈ ತುಂಬಾ ಕೋಮು ವಿಷ ತುಂಬಿಕೊಂಡವರಿಗೆ ಇದೆಲ್ಲ ಎಲ್ಲಿ ಗೊತ್ತಾಗುತ್ತೆ.



