ಸಂಪಾದಕೀಯ

ಮಾತೃ ಸಂಕಲ್ಪ, ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ, ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ 12ವರ್ಷದ ಸಂಭ್ರಮಾಚರಣೆ

ಮಾತೃ ಸಂಕಲ್ಪ, ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ, ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ 12ವರ್ಷದ ಸಂಭ್ರಮಾಚರಣೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಡಾ.ರಾಜ್ ಕುಮಾರ್ ವಾರ್ಡ್ ನಲ್ಲಿ ಮಂಡಲ ಬಿಜೆಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ಕೇಂದ್ರ ಸರ್ಕಾರ 12ವರ್ಷಗಳು ಪೂರೈಸಿದ ಸಂದರ್ಭ ಹಾಗೂ ಸಸಿ ನೆಡುವ ಕಾರ್ಯಕ್ರಮ, ಪರಿಸರ ಜನಜಾಗೃತಿ ಕಾರ್ಯಕ್ರಮ.

ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು, ಪ್ರಭಾರಿ ವಸಂತ್ ಕುಮಾರ್ ಭವಾನಿ, ಮಂಡಲ ಅಧ್ಯಕ್ಷರಾದ ಎನ್.ಬಿ.ಮಂಜುನಾಥ್ ರವರು ಸಸಿ ನೆಟ್ಟು, ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ತಾಯಿ ಮತ್ತು ಭೂಮಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಭೂಮಿ ತಾಯಿಯನ್ನು ನಾವು ರಕ್ಷಣೆ ಮಾಡಿದರೆ ನಾವು ಉಳಿಯುತ್ತೇವೆ.

ಪ್ರಧಾನಿ ನರೇಂದ್ರಮೋದಿರವರ 12ವರ್ಷ ಪೂರೈಸಿ ಯಶ್ವಸಿಯಾಗಿ ಮುಂದೆ ಸಾಗುತ್ತಿದ್ದಾರೆ. ಎಂತಹ ಸಂಕಷ್ಟಗಳು ಬಂದು ದೇಶ ಜನರಿಗೆ ಯಾವುದೇ ತೊಂದರೆಯಾಗದಂತೆ ಜನರ ಜೀವ ರಕ್ಷಣೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರವರು ಪರಿಸರ ಉಳಿಸಲು ಸಾರ್ವಜನಿಕರಿಗೆ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡಿ ಎಂದು ಕರೆ ನೀಡಿದರು ಇಂದು ವಿಶ್ವ ಪರಿಸರ ದಿನಾಚರಣೆ ಮತ್ತು ತಾಯಿ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪರಿಸರ ಉಳಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡರುಗಳಾದ ದೊಡ್ಡವೀರಯ್ಯ, ಡೊಡ್ಡಯ್ಯ, ಎಸ್.ರಾಜು, ಜ್ಞಾನೇಶ್, ಶಾಮಣ್ಣ, ನೀರಜ್ ಕಾಮತ್, ರಾಘವೇಂದ್ರ, ಕನ್ನಡ ಮಂಜು, ರವಿಮಂಜುನಾಥ್,ಜಗದೀಶ್ ಪಿ ಗುರುಮೂರ್ತಿ, ರಮೇಶ್ ಕಿಣಿ , ಹೇಮಂತ್ ಕುಮಾರ್,ಸುಧೀರ್, ಮಂಜುನಾಥ್, ಜಗದೀಶ್, ಈಶಣ್ಣ, ವಿಜಯಸಿಂಗ್,

Related Articles

Leave a Reply

Your email address will not be published. Required fields are marked *

Back to top button