ಸೇವಾ ಸಂಕಲ್ಪ ಜನರ ಸೇವೆಗಾಗಿಯೇ ಉಮೇಶ್ ಶೆಟ್ಟಿ ಬೆಂಗಳೂರು

ಸೇವಾ ಸಂಕಲ್ಪ ಜನರ ಸೇವೆಗಾಗಿಯೇ ಉಮೇಶ್ ಶೆಟ್ಟಿ
ಬೆಂಗಳೂರು. ಸೇವಾ ಸಂಕಲ್ಪ ಜನರ ಸೇವೆಗಾಗಿಯೇ ಎಂದುಅಭಯ ಸೇವಾ ಫೌಂಡೇಶನ್ (ರಿ) ಬೆಂಗಳೂರು ಅಧ್ಯಕ್ಷ ಉಮೇಶ್ ಶೆಟ್ಟಿ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು .ಅಭಯ ಸೇವಾ ಫೌಂಡೇಶನ್
19 ರಿಂದ 21 ರ ವರೆಗೆ ಬೆಂಗಳೂರಿನ ರಾಜಾಜಿನಗರದ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಸೇವಾ ಸಂಕಲ್ಪ ಎನ್ನುವ ಶೀರ್ಷಿಕೆಯಡಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ವಾರ್ಷಿಕ ಸಡಗರ, ಪಥ ಸಂಚಲನ, ಪಂಜಿನ ಮೆರವಣಿಗೆ, ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮಕ್ಕೆ ಮಾದಾರ ಚೆನ್ನಯ್ಯ ಸ್ವಾಮೀಜಿಗಳು, ಪೇಜಾವರ ಶ್ರೀ ಸ್ವಾಮೀಜಿಗಳು, ನಿರ್ಮಲಾನಂದ ಸ್ವಾಮೀಜಿಗಳು ಸೇರಿದಂತ ಹಲವಾರು ಧಾರ್ಮಿಕ ಮುಖಂಡರು, ಶಾಸಕರಾದ ಸುರೇಶ್ ಕುಮಾರ್, ಮತ್ತಿತರ ಗಣ್ಯರು, ಪದಾಧಿಕಾರಿಗಳು, ಉದ್ಯಮಿಗಳು, ಸಾರ್ವಜನಿಕರು ಸೇರಿದಂತೆ ಈ ಮೂರು ದಿನಗಳಲ್ಲಿ ಸುಮಾರು 500 ದಿಂದ 1000 ಜನ ಸೇರುತ್ತಾರೆಂದು ಮಾಹಿತಿ ತಿಳಿಸಿಇದರು.
ಅಮರನಾಥ್ ಹೆಗಡೆ, ಮಂಜುನಾಥ್, ಅಜಿತ್ ಕುಮಾರ್ ಶೆಟ್ಟಿ, ಸುರೇಂದ್ರ ಶೆಟ್ಟಿ, ದೇವರಾಜ್ ಮುಂತಾದವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.




