ಸುದ್ಧಿ

ಬಸವಚೇತನ 2024-25 ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ.ತುರವಿಹಾಳ

ಬಸವಚೇತನ 2024-25 ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

ತುರವಿಹಾಳ: ಪಟ್ಟಣದ ಬಸವ ಚೇತನ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲೆ ಮತ್ತು ಪಿಯು ಕಾಲೇಜಿನ ಶಾಲಾ ಸಂಸತ್ ಚುನಾವಣೆ ನಡೆಯಿತು.
ಶಾಲಾ ಸಂಸತ್ ಚುನಾವಣೆ ವಿಭಾಗದಲ್ಲಿ ಎಂಟು ವಿದ್ಯಾರ್ಥಿ ಅಭ್ಯರ್ಥಿಗಳು ಮತ್ತು ಕಾಲೇಜ್ ಸಂಸತ್ ಚುನಾವಣೆಯ ವಿಭಾಗದಲ್ಲಿ ಒಂಬತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಚುನಾವಣಾಧಿಕಾರಿಯಾಗಿ ಪಾಲಕ್ಷಯ್ಯ ಹಿರೇಮಠ ಉಪನ್ಯಾಸಕರು ಶಾಲಾ ಚುನಾವಣಾಧಿಕಾರಿಯಾಗಿ ಮಣಿಕಂಠ ಶಿಕ್ಷಕರು ಕಾರ್ಯ ನಿರ್ವಹಿಸಿದರು

1ನೇ ಮತಗಟ್ಟೆ ಅಧಿಕಾರಿಗಳಾಗಿ ಪಿಯಸಿ ವಿದ್ಯಾರ್ಥಿಗಳಾದ ಮಿನಾಕ್ಷಿ, ಮಲ್ಲಿಕಾರ್ಜುನ ತಳವಾರ, ಭೂಮಿಕ ಕಲ್ಮಂಗಿ ಮತ್ತು ಅಮರೇಶ .
2ನೇ ಮತಗಟ್ಟೆ ಅಧಿಕಾರಿಗಳಾಗಿ ಶಾಲಾ ವಿದ್ಯಾರ್ಥಿಗಳಾದ ಸಿಂಚನ ವಿ.ಜಿ., ತಸ್ವಿರಬಾನು ಗುಂಜಳ್ಳಿ ಕ್ಯಾಂಪ ಅಂಜಿನಮ್ಮ ಮತ್ತು ಚಂದನ ಆನೆಗುಂದಿಯವರು ಕರ್ತವ್ಯ ನಿರ್ವಹಿಸಿದರು
ವಿದ್ಯಾರ್ಥಿಗಳಾದ ಚನ್ನಬಸವ ನಿರೂಪಾದಿ ಅಕ್ಷಯ ಮತ್ತು ಬೀರಲಿಂಗ ಪೊಲೀಸ್ ಕರ್ತವ್ಯ ನಿರ್ವಹಿಸಿದರು
ಆಶಾ ಕಾರ್ಯಕರ್ತರಾಗಿ ಉಷಾ, ರಾಧಿಕಾ, ಸ್ವಾತಿ ಮತ್ತು ಕಾವ್ಯ ಕಾರ್ಯ ನಿರ್ವಹಿಸಿದರು

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಾವಿತ್ರಿ ಗಚ್ಚಿನಮನಿ, ಜ್ಯೋತಿ ಕೊನ್ನಾಪೂರ ಅಮರೇಶ ಮಾಟೂರು ಲಕ್ಷ್ಮೀಬಾಯಿ ಗುಡೂರು ರಮೇಶ ಚಳ್ಳೂರು
ಶಿಕ್ಷಕರಾದ ಅಮರೇಶ ಹುಡೇದ್ ಬಸವರಾಜ ಚಲುವಾದಿ ದೊಡ್ಡಬಸವರಾಜ ಜುಮಲಾಪೂರ ಶಿಕ್ಷಕಿಯರಾದ ಅನಿತಾಕುಮಾರಿ ವಿಜಯಲಕ್ಷ್ಮಿ ಮಡಿವಾಳರ ಶಿಲ್ಪಾ ಹಿರೇಮಠ ರೇಣುಕಾ ಸಂದೂರಿ ಉಮಾದೇವಿ ಸವಿತಾ ವಿಜಯಲಕ್ಷ್ಮೀ ಬಟ್ಟೇರ್ ಹಾಗೂ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು..

ವರದಿ: ವಿಜಯ್ ಕುಮಾರ್ ಹಿರೇಮಠ್ ತುರುವಿಹಾಳ

Related Articles

Leave a Reply

Your email address will not be published. Required fields are marked *

Back to top button