ಉಡುಪಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ತಪ್ಪನ್ನು ಒಪ್ಪಿಕೊಂಡು, ಕಾರ್ಮಿಕ ಇಲಾಖೆ ಖಜಾನೆಗೆ 4,70,686 ಹಣ ಮರಳಿಸಿರುವ ಸುದ್ಧಿ.
ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ಸುಬ್ರಹ್ಮಣ್ಯ ಪೂಜಾರಿ ಅವರ ಸಹಕಾರದೊಂದಿಗೆ, ಕಾರ್ಮಿಕ ಇಲಾಖೆಗೆ ವಂಚನೆ ಮಾಡಲು ಪ್ರಯತ್ನ ಮಾಡಿ ಸಿಕ್ಕಿಬಿದ್ದ ಮಾಲೀಕರ ವಿರುದ್ಧ ಕೆ.ಕೆ.ಕೆ.ಪಿ ನಿರಂತರ ಹೋರಾಟದ ಫಲವಾಗಿ ವಿಧಿಯಿಲ್ಲದೆ ನಮ್ಮ ಸಂಘಟನೆಗೆ ಹೆದರಿ ಉಡುಪಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ತಪ್ಪನ್ನು ಒಪ್ಪಿಕೊಂಡು ನೀಡಿರುವ ಆದೇಶದಂತೆ ಕಾರ್ಮಿಕ ಇಲಾಖೆ ಖಜಾನೆಗೆ 4,70,686 ಹಣ ಬರುತ್ತಿರುವುದು ತುಂಬಾ ಸಂತೋಷದ ವಿಚಾರ.
ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡಿ ಸಹಕಾರ ನೀಡುತ್ತಿರುವ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಹಳೆ ಮೈಸೂರು ಕರ್ನಾಟಕ ಪ್ರಾಂತೀಯ ಸದಸ್ಯರು, ಜಿಲ್ಲಾ ಘಟಕದ ಸದಸ್ಯರು ಹಾಗೂ ಇತರೆ ಸದಸ್ಯರಿಗೆ ಮುಖ್ಯವಾಗಿ ಶ್ರೀಯುತ ಸುಬ್ರಹ್ಮಣ್ಯ ಪೂಜಾರಿ, ಶ್ರೀಯುತ ಜಿಎಂ ಉದಯ್, ಶ್ರೀಯುತ ಪ್ರವೀಣ್ ಕುಮಾರ್. ಬಿ. ಆರ್, ಡೆಲ್ಲಿ ಬಾಬು, ವಿ ಮಂಜುನಾಥ್, ದ್ಯಾವಪ್ಪ, ಸುಬ್ರಮಣಿ, ಅತಾವುಲ್ಲಾ, ಜಬಿ, ಕೆ.ವಿ.ಶ್ರೀನಿವಾಸ ಗೌಡ, ಗುರುನಾಥ್ ಹುಲಗೋರ, ಜಯಚಂದ್ರ, ಸೋಮಶೇಖರ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು, ನಮನಗಳು.
ನಮ್ಮ ಕಾನೂನು ರೀತಿಯ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಮಾಹಿತಿ ಹಕ್ಕು ಕಾರ್ಯಕರ್ತರ ರಾಜ್ಯ ಸಮಿತಿ, ಜಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಶ್ರೀಯುತ ಬಿ.ಎನ್.ಯೋಗಾನಂದ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ನಾಗರಾಜ್, ಅಂಬೇಡ್ಕರ್ ವಾಹಿನಿ ಪತ್ರಿಕಾ ಬಳಗ, ಡಾಕ್ಟರ್ ಕೋದಂಡರಾಮ ಅವರ ಅಂಬೇಡ್ಕರ್ ಸ್ವಾಭಿಮಾನಿ ಸೇನಾ ಬಳಗ, ವಾರ್ತಾಜಾಲ ಪತ್ರಿಕೆಯ ಸಂಪಾದಕ ಶ್ರೀಯುತ ಬಿಕೆ ಪ್ರಸನ್ನ ಹಾಗು ಇತರರಿಗೆ ನಮ್ಮ ಹೃತ್ಪೂರ್ವಕ ನಮನಗಳು.
ಮಲ್ಲಿಕಾರ್ಜುನ ರಾಜು
ಸಂಸ್ಥಾಪಕ ಅಧ್ಯಕ್ಷರು
ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಹಾಗೂ ಯೂತ್ ಫಾರ್ ಹ್ಯೂಮನ್ ರೈಟ್ಸ್



