ಶಾಸಕರಾದ ಶಿವರಾಜ್ ತಂಗಡಿಗಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ದೇವರ ಮೊರೆ ಹೋದ ಕುಟುಂಬದ ಸದಸ್ಯರು.

ಶಾಸಕರಾದ ಶಿವರಾಜ್ ತಂಗಡಿಗಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ದೇವರ ಮೊರೆ ಹೋದ ಕುಟುಂಬದ ಸದಸ್ಯರು
ಕನಕಗಿರಿ ವಿಧಾನ ಸಭಾ ಕ್ಷೇತ್ರದ ಸದಸ್ಯರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಿಂದುಳಿದ ವರ್ಗಗಳ ಸಚಿವ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರಿಗೆ ಸಚಿವ ಸಂಪುಟ ದಲ್ಲಿ ಮುಂದುವರಿಲಿ ಎಂದು ಸಚಿವರ ಪತ್ನಿ ಪುತ್ರ ಹಾಗೂ ತಾಯಿ ಸಮೇತ ಕನಕಗಿರಿ ಪಟ್ಡಿಟಣದ ಆರಾಧ್ಯ ದೈವ ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ 101 ಕಾಯಿ ಹೊಡೆದು ಪ್ರಾರ್ಥನೆ ಮಾಡಿದ್ದಾರೆ .
ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಅವರ ತಾಯಿ ಹುಲಿಗೆಮ್ಮ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮತ್ತು ಜನ ಪ್ರಿಯ ಶಾಸಕ ಹಾಗೂ ಸಚಿವರಾಗಿ ಕರ್ನಾಟಕ ಕ್ಕೆ ಅವರು ಕಲ್ಯಾಣ ಕರ್ನಾಟಕ ಭಾಗದ 40 ವಿಧಾನ ಸಭೆ ಕ್ಷೇತ್ರಗಳ ವ್ಯಾಪ್ತಿಯ ಈಶಾನ್ಯ ಕ್ಷೇತ್ರದಿಂದ ಸತತ 3 ಬಾರಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸತತವಾಗಿ ಈಶಾನ್ಯ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರದಲ್ಲಿ ಕನಕಗಿರಿ ಕ್ಷೇತ್ರಕ್ಕೆ ಅಪಾರ ಸೇವೆ ಮತ್ತು ಈ ಭಾಗದ ಪ್ರಭಾವಿ ಯಾಗಿ ಅಬಿರುದ್ಧಿ ಕೆಲಸ ಮಾಡಿದ್ದಾರೆ ಕನಕಗಿರಿಯ ಕ್ಷೇತ್ರದ ಜನರಿಗೆ ಮಹರ್ಷಿ ಭಗೀರಥ ನಾಗಿ ನೀರಿನ ಭಾವ ಇಲ್ಲದೆ ಕೆರೆ ತುಂಬಿಸುವ ಕೆಲಸ ಮಾಡುವ ಮೂಲಕ ಪ್ರಸಿದ್ಧರಾಗಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶಿ ಅಲ್ಲಿ ಅನೇಕೆ ಕೊಡುಗೆ ಅಬಿರುದ್ಧಿ ಮಾಡಿದ್ದಾರೆ ಮತ್ತೆ ಅವರಿಗೆ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಮಾಡಬೇಕು ಎಂದು ಪುತ್ರ ಶಶಾಂಕ್ ತಂಗಡಗಿ ಅವರು ಮಾತನಾಡಿದರು ಮತ್ತು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ ನಾಯಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಮನವಿ ಮಾಡಿದ್ದಾರೆ.
- ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ*




