ಕನಕಗಿರಿಯ ಆಡಳಿತ ಅಧಿಕಾರಿಗಳಿಂದ ಪೂರ್ವಭಾವಿ ಸಭೆ

ಕನಕಗಿರಿಯ ಆಡಳಿತ ಅಧಿಕಾರಿಗಳಿಂದ ಪೂರ್ವಭಾವಿ ಸಭೆ
ಕನಕಗಿರಿ ತಾಲೂಕಿನ ಆಡಳಿತ ಕಚೇರಿಯಲ್ಲಿ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆಯ ವಿಷಯವಾಗಿ ಪೂರ್ವಭಾವಿ ಸಭೆ ಕರೆಯಲಾಯಿತು ಈ ಸಭೆಯಲ್ಲಿ ಹಾಲುಮತ ಸಮಾಜದ ಎಲ್ಲಾ ಗಣ್ಯರು ಹಾಗೂ ಗುರು ಹಿರಿಯರು ಪಾಲ್ಗೊಂಡು ಸದರಿ ಸಭೆಯಲ್ಲಿ ಭಕ್ತ ಕನಕದಾಸನ ಜಯಂತಿ ಅಂಗವಾಗಿ ಚರ್ಚೆ ನಡೆಸಲಾಯಿತು
ನಂತರ ಸದರಿ ದಿನಾಂಕ್ 30/11/2023 ರಂದು ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಬೇಕೆಂದು ಆದೇಶಿಸಿದರು ಜೊತೆಗೆ ಹಾಲುಮತ ಸಮಾಜದ ಗಣ್ಯರ ಜೊತೆ ಆಚರಣೆಯೇ ವಿಚಾರ ಚರ್ಚಿಸಿದರು.
ಈ ವೇಳೆ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಕೆ ಎಸ್ ಹೊರಪೇಟೆ ಗ್ರೇಟ್ ೨ ತಹಶೀಲ್ದಾರ್ ಪಟ್ಟಣ ಪಂಚಾಯಿತಿ ಪುರುಷೋತ್ತಮ್ ಪತ್ತಾರ್ ಶಿಕ್ಷಣ ಇಲಾಖೆಯ ಅಂಜನಪ್ಪ ಕೆಎಸ್ಆರ್ಟಿಸಿ ಶ್ರೀರಾಮ್ ತೋಟಗಾರಿ ಇಲಾಖೆಯ ಹನುಮೇಶ್ ಅರಣ್ಯ ಇಲಾಖೆ ಪಶು ಸಂಗೋಪನೆ ಇಲಾಖೆ ಸೇರಿ ಹಾಲುಮತ ಸಮಾಜದ ಅಧ್ಯಕ್ಷರಾದ ನಾಗಪ್ಪ ಹುಗ್ಗಿ ಮಾಜಿ ಟಿ ಪಿ ಬಸಂತ್ ಗೌಡ ಪಾಟೀಲ್ ಕೆಂಚಪ್ಪ ನೀರುಟಿ ನಾಗರಾಜ್ ಗಂಗಾಧರ್ ಚೌಡಕಿ ಶರಣಪ್ಪ ತಂಗಡಿಗಿ ಸೇರಿ ಸಮಾಜದ ಗಣ್ಯಾರು ಗುರು ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




