ಅಂಜಲಿ ಹೇಮಂತ ನಿಂಬಾಳ್ಕರ್ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಗೋವಾ ರಾಜ್ಯ ಮತ್ತು ದಿಯು ದಮನ್ ನಾಗರಾ ಹವೇಲಿ ಉಸ್ತುವಾರಿಗಳಾಗಿ ಆಯ್ಕೆ: ಖಾನಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆಗಳು
ಇಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗಳನ್ನು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷವು ದೆಹಲಿ ಕೇಂದ್ರ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಮತ್ತು ಅವರಿಗೆ ಕೇಂದ್ರಾಡಳಿತ ಪ್ರದೇಶವಾದ ದಿಯು ದಮನ್ನ ಹಾಗೂ ಗೋವಾ ರಾಜ್ಯದ ಉಸ್ತುವಾರಿ ನೀಡಲಾಗಿದೆ.
ಅಖಿಲ ಭಾರತೀಯ ಕಾಂಗ್ರೆಸ್ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ ಸತೀಶ್ ಅಣ್ಣ ಜಾರಕಿಹೊಳಿ ಹೊಂದಿದ್ದರು, ಈಗ ಪಕ್ಷವು ಅಂಜಲಿತಾಯಿ ಅವರಿಗೆ ಅವಕಾಶ ನೀಡಿದೆ, ಪಕ್ಷ ಮತ್ತು ಹೈಕಮಾಂಡ್ ಅಂಜಲಿತಾಯಿ ಅವರ ಬೆನ್ನಿಗೆ ಸದಾ ನಿಂತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ…
ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಯಾವಾಗಲೂ ಜನರ ಸೇವೆ ಒಂದೇ ಆಗಿರುತ್ತದೆ, ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಹೈಕಮಾಂಡ್ ನೀಡಿದೆ, ಪಕ್ಷದ ಅಧ್ಯಕ್ಷ ಖರ್ಗೆ ಸಾಹೇಬರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಡಾ ಅಂಜಲಿತಾಯಿ ಅವರಿಗೆ ಈ ಅವಕಾಶವನ್ನು ನೀಡಿದ್ದಾರೆ.
ಈ ನಿಟ್ಟಿನಲ್ಲಿ ಖಾನಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರೀ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ, ಶ್ರೀ ಕೆ ಸಿ ವೇಣುಗೋಪಾಲ, ಶ್ರೀ ರಣದೀಪ್ ಸುರ್ಜೇವಾಲ್ ಅವರಿಗೆ ಧನ್ಯವಾದಗಳು ತಿಳಿಸುತ್ತೇವೆ..
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ. ಅಂಜಲಿತಾಯಿ ಅವರಿಗೆ ಅಭಿನಂದನೆಗಳು..💐ಖಾನಾಪುರ ತಾಲೂಕಿನ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಂತಸದ ಅಲೆ ಇದೆ..
ಯಾರು ಏನೇ ಹೇಳಿದರೂ ಕಾಂಗ್ರೆಸ್ ಹೈಕಮಾಂಡ್ ಡಾ. ಅಂಜಲಿತಾಯಿ ಅವರ ಬೆನ್ನಿಗೆ ಸದಾ ಗಟ್ಟಿಯಾಗಿ ನಿಂತಿದೆ ಎಂಬುದನ್ನು ಈ ಆಯ್ಕೆಯಲ್ಲಿ ಕಂಡು ಬರುತ್ತದೆ ಎಂದು ಮಹದೇವ ಕೋಳಿ ಹೇಳಿದ್ದಾರೆ.
🚩 ಜೈ ಖಾನಾಪುರ 🚩ಕೃಪೆ..



