ದಿನಾಂಕ 28.08.2024 ರಂದು ಬೈಂದೂರಿನ ಸೋಮೇಶ್ವರ ಬೀಚಿನ ಹತ್ತಿರದಲ್ಲಿರುವ ಕಾರ್ಮಿಕರಿಗೆ ಸುರಕ್ಷಿತ ಕಿಟ್
ವಿಶ್ವ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ದಿನಾಂಕ 28.08.2024 ರ ಬುಧವಾರದಂದು ಉಡುಪಿ ಜಿಲ್ಲೆಯ ಬೈಂದೂರಿನ ಸೋಮೇಶ್ವರ ಬೀಚಿನ ಹತ್ತಿರದಲ್ಲಿರುವ ಕಾರ್ಮಿಕರಿಗೆ ಸುರಕ್ಷಿತ ಕಿಟ್ ಗಳನ್ನು ನೀಡಲಾಗುವುದು.
ವಿಶ್ವ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಹಾಗೂ ಯೂತ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥಾಪಕ ಅಧ್ಯಕ್ಷರಾದ ಕೆ.ಮಲ್ಲಿಕಾರ್ಜುನ ರಾಜು ಅವರು ಈ ಹಿಂದೆ ಬೆಂಗಳೂರುನಲ್ಲಿರುವ ಖಾಸಗಿ ವೈದ್ಯ ಸಂಸ್ಥೆಗೆ (ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, ಈ ಪಿ ಐ ಪಿ ಏರಿಯಾ, ವೈಟ್ಫೀಲ್ಡ್) ಅಂಗಾಂಗಗಳನ್ನು ದಾನ ಮಾಡಿದ್ದು ಆ ಹೇಳಿಕೆಯನ್ನು ಹಿಂಪಡೆದು, ನಮ್ಮ ದೇಶದ ಮಿಲಿಟರಿ ನಲ್ಲಿರುವ ಸೈನಿಕರಿಗೆ ಉಪಯೋಗ ಆಗುವಂತೆ ತನ್ನ ಮರಣದ ನಂತರ ತನ್ನ ಅಂಗಾಂಗಗಳನ್ನು ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆ ದಾನ ಮಾಡುವಂತೆ ನಿರ್ಧರಿಸಿ ಅದಕ್ಕೆ ಸಂಬಂಧಿಸಿದ ಪತ್ರವನ್ನು ಅಂಚೆ ಮೂಲಕ ಭಾರತದ ರಕ್ಷಣಾ ಮಂತ್ರಿಗಳಾದ ಶ್ರೀಯುತ ರಾಜನಾಥ್ ಸಿಂಗ್ ಅವರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವರು. ಈ ಬಗ್ಗೆ ಅಂದು ಪ್ರಕಟಿಸಲಾಗುವುದು.



