ಪತ್ರಿಕೋದ್ಯಮ

904 ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ. ಸೂರ್ಯಪ್ರಕಾಶ ಕೋಲಿ

04-02-2024 ರಂದು
ಬೆಳಗಾವಿ ನಗರದ ಪ್ರತಿಷ್ಠಿತ ಸರ್ದಾರ್ ಮೈದಾನದಲ್ಲಿ
ಬೆಳಗಾವಿ ಜಿಲ್ಲಾ ಕೋಲಿ ಬೆಸ್ತ ಜಿಲ್ಲಾ ಸಂಘದ ಅಧ್ಯಕ್ಷರಾದ
ದಿಲೀಪ್ ಕುರಂದವಾಡೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬೃಹತ್ ಕೋಲಿ ಬೆಸ್ತ ST ಹಕ್ಕೊತ್ತಾಯ ಸಮಾವೇಶ ಹಾಗೂ 904 ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವದ ಕಾರ್ಯಕ್ರಮದ ತಯಾರಿಯು ನಡೆಯುತ್ತಿದ್ದು ಕಾರ್ಯಕ್ರಮದ ಅಂತಿಮ ಸಿದ್ಧತೆಯನ್ನು 02-02-2024 ರಂದು ಪರಿಶೀಲಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿಗಳು.

ಸಮಾವೇಶದ ತಯಾರಿಯನ್ನು ವಿಕ್ಷಿಸಿದ ಹಿರೇಮಠದ ಚಂದ್ರಶೇಖರ ಸ್ವಾಮೀಜಿಗಳು ವ್ಯವಸ್ಥಿತ ತಯಾರಿಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಬಳಿಕ ಮಾಧ್ಯಮಗಳಿಗೆ
ಮಾತನಾಡಿದ ಸ್ವಾಮಿಜೀಗಳುಬ
ಈಗಾಗಲೇ ಮೂಲ ಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿರುವೆ
ಈಗ ಸಮಾಜದ ಜಾಗೃತಿ ಸಮಾವೇಶ ಬೆಳಗಾವಿಯಲ್ಲಿ ಸಂಘಟಿಸುತ್ತಿರುವುದು ಖುಷಿ ತಂದಿದೆ
ಕೋಲಿ ಬೆಸ್ತ ಸಮಾಜ ಒಂದಾಗಿ ನಿಜಶರಣ ಅಂಬಿಗರ ಚೌಡಯ್ಯ ತತ್ವ ಅಳವಡಿಸಿಕೊಳ್ಳಬೇಕು
ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಕೋಲಿ ಬೆಸ್ತ ಸಮಾಜ ಪ್ರಗತಿ ಸಾಧಿಸಬೇಕು
ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ರೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕಾರ್ಯಕ್ರಮವು ಯಶಸ್ವಿಯಾಗಲಿ ಎಂದರು.

ಸೂರ್ಯಪ್ರಕಾಶ ಕೋಲಿ
ಬೆಂಗಳೂರು.
9945138515

Related Articles

Leave a Reply

Your email address will not be published. Required fields are marked *

Back to top button