ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ 24.12.2024 ಸಂಜೆ 4.30 ಕ್ಕೆ ನಯನ ಸಭಾಂಗಣದಲ್ಲಿ *ರಂಗಸಿರಿ* ಕಾರ್ಯಕ್ರಮ .
ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ
24.12.2024 ಮಂಗಳವಾರ ಸಂಜೆ 4.30 ಕ್ಕೆ ನಯನ ಸಭಾಂಗಣದಲ್ಲಿ *ರಂಗಸಿರಿ* ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ಅಭಿನಯಿಸುವ ಪರಿಸರ ರಕ್ಷಣೆ ಕುರಿತ *ವೃಕ್ಷೋ ರಕ್ಷತಿ ರಕ್ಷಿತ:* ಮತ್ತು ಹಿರಿಯ ಕಲಾವಿದರು ಅಭಿನಯಿಸುವ *ಷೇಕ್ಸ್ಪಿಯರ್ ನ ಬುರುಡೆ* ನಾಟಕಗಳ ಪ್ರದರ್ಶನ ಇರುತ್ತದೆ.
ಕಾರ್ಯಕ್ರಮವನ್ನು ಮಾಜಿ ಮೇಯರ್
ಶ್ರೀ ಬಿ. ಎನ್. ಮಂಜುನಾಥ ರೆಡ್ಡಿ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವಿಮರ್ಶಕರಾದ
ಡಾ. ಬೈರಮಂಗಲ ರಾಮೇಗೌಡ ,
ಹಿರಿಯ ಪತ್ರಕರ್ತರಾದ
ಶ್ರೀ ರಾಜು ಮಳವಳ್ಳಿ ಅವರು ಭಾಗವಹಿಸಲಿದ್ದು ಅವರಿಗೆ ಪರಂಪರಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ವಿಶೇಷ ಆಹ್ವಾನಿತರಾಗಿ ಎಇಎಚ್ ಬಿಸಿಎಸ್ ನ ನಿರ್ದೇಶಕರಾದ
ಶ್ರೀ ಎನ್.ಎಸ್.ಚಂದ್ರಮೋಹನ್ , ಎಚ್ ಎ ಎಲ್ ಲಲಿತ ಕಲಾ ಸಂಘದ ಮಾಜಿ ಕಾರ್ಯದರ್ಶಿ
ಶ್ರೀ ಎಂ.ಆರ್. ನದಾಫ್, ಎಚ್ ಎ ಎಲ್ ಕರ್ನಾಟಕ ಕಲಾ ಸಂಘದ ಅಧ್ಯಕ್ಷರಾದ
ಶ್ರೀ ಎ.ಎಸ್.ಜಯತೀರ್ಥ ಭಾಗವಹಿಸುವರು.
ಪರಂಪರಾ ಕಲ್ಬರಲ್ ಫೌಂಡೇಶನ್ (ರಿ.)ನ ಅಧ್ಯಕ್ಷ
ಜಿ ಪಿ ರಾಮಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಎಸ್. ಸುಧಾಕರ್ ಮತ್ತು ಜಿ.ಮಧುಸೂದನ ನಾಯಕ ಕಾರ್ಯಕ್ರಮ ಪ್ರಸ್ತುತಪಡಿಸುವರು.
ನಿಮ್ಮ ನಿರೀಕ್ಷೆಯಲ್ಲಿ

ಜಿ ಪಿ ರಾಮಣ್ಣ
ಅಧ್ಯಕ್ಷ
ಪರಂಪರಾ ಕಲ್ಚರಲ್ ಫೌಂಡೇಶನ್
9448202708



