ಸುದ್ಧಿ

ಕಳ್ಳರ ಹಾವಳಿಯಿಂದ ಎಚ್ಚರಿಕೆಯಿಂದ ಇರಿ: ಡಾ. ನಾಗವೇಣಿ ಎಸ್ ಪಾಟೀಲ್.

ಕಳ್ಳರ ಹಾವಳಿಯಿಂದ ಎಚ್ಚರಿಕೆಯಿಂದ ಇರಿ: ಡಾ. ನಾಗವೇಣಿ ಎಸ್ ಪಾಟೀಲ್
ಸಿಂಧನೂರು : ಇತ್ತೀಚೆಗೆ ಸಿಂಧನೂರ್ ನಗರದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಪರೀತ ಕಳ್ಳತನವಾಗುತ್ತಿತ್ತು ಕಳ್ಳರ ಹಾವಳಿ ತುಂಬಾ ಹೆಚ್ಚಾಗುತ್ತಿದೆ ಇದರಿಂದ ಜನರು ಭಯಭೀತಿಯಿಂದ ಓಡಾಡಬೇಕಾಗುತ್ತಿದೆ. ಹೆಣ್ಣು ಮಕ್ಕಳು ಓಡಾಡುವುದು ತುಂಬಾ ಕಷ್ಟಕರ ಹಾಗೂ ಭಯವಾಗಿದೆ. ಅಡವಿ(ತೋಟದ)ವಸ್ತಿಯಲ್ಲಿ ವಾಸಿಸುವ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು…
ಆಯಾ ಗ್ರಾಮಗಳ ಯುವಕರು ರಾತ್ರಿ ಸಮಯದಲ್ಲಿ ಜಾಗೃತರಾಗಬೇಕು ಮತ್ತು ತಮ್ಮ ಸುತ್ತ ಮುತ್ತಲಿನರುವವರನ್ನು ಕಳ್ಳರಿಂದ ಜಾಗೃತಗೊಳಿಸಿ…
ಗ್ರಾಮದ ಪ್ರಮುಖ ಬೀದಿಗಳಲ್ಲಿ, ಮನೆಯ ಅಕ್ಕ ಪಕ್ಕ ಬೆಳಕಿನ ವ್ಯವಸ್ಥೆಗೆ ಕ್ರಮ ವಹಿಸಿ…
ರಾತ್ರಿ ವೇಳೆ ಯುವಕರು ಗುಂಪುಗಳೊಂದಿಗೆ ಎಚ್ಚರಿಕೆ ವಹಿಸಿ. .ಊರುಗಳಲ್ಲೇ ಆಗಲಿ ಪೇಟೆಗಳಲ್ಲೇ ಆಗಲಿ ಜನರು ರಾತ್ರಿ ಸಮಯ ಸ್ವಲ್ಪ ಎಚ್ಚರ ವಹಿಸಿದರೆ ಹಲವಾರು ಕಳ್ಳತನವನ್ನು ತಡೆಯಬಹುದು ಕಳ್ಳರನ್ನು ಮಟ್ಟ ಹಾಕಬಹುದು ದುಶ್ಚಟಗಳ ದಾಸರಾಗಿರುವ ಕಳ್ಳರು ಕೈಲಿ ದುಡಿಯಲು ಆಗದೆ ಎಮ್ಮೆ ರೀತಿ ಮೈ ಬೆಳೆಸಿಕೊಂಡು ತಿರುಗುತ್ತಾರೆ ಅಂತವರು ಬರೆ ಇಂಥವೃತ್ತಿಯನ್ನೇ ಮಾಡುವುದು?? ಎಂದು ಆಕ್ರೋಶ ವ್ಯಕ್ತಪಡಿಸಿದರು…. ಇಂದು ಬೆಳಗಿನ ಜಾವ ವಾಕಿಂಗ್ ಹೋಗುವ ಸಮಯದಲ್ಲಿ ಆದರ್ಶ ಕಾಲೋನಿಯಲ್ಲಿ ಒಬ್ಬ ಹೆಣ್ಣು ಮಗಳ ಸರವನ್ನು ಕದಿಯಲು ಪ್ರಯತ್ನಪಟ್ಟಿದ್ದಾರೆ. ಅವರ ಕೂಗನ್ನು ಕೇಳಿ ಅಲ್ಲಿದ್ದ ಜನರು ಓಡಿ ಬರುವಷ್ಟರಲ್ಲಿ ಆ ಕಳ್ಳರು ಪರಾರಿಯಾಗಿದ್ದಾನೆ…ಇದನ್ನು ಕಂಡು ಡಾ. ನಾಗವೇಣಿ ಎಸ್ ಪಾಟೀಲ್ ಅವರು ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿ.. ಜನರು ಓಡಾಡುವಂತ ಪ್ರದೇಶಗಳಿಗೆ ಸೂಕ್ತ ಬಂದೋಬಸ್ತ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button