ಸುದ್ಧಿ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಅಕ್ರಮಗಳು ನಿಲ್ಲಿಸಿ – ಮೋಹನ್ ರೆಡ್ಡಿ.

ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಅಕ್ರಮಗಳು ನಿಲಿಸಿ – ಮೋಹನ್ ರೆಡ್ಡಿ. ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಅಕ್ರಮಗಳು ನಿಲಿಸಿ ಎಂದು ವಿಭವ ಕರ್ನಾಟಕ ಭೂ ರಕ್ಷಣಾ ವೇದಿಕೆ ಅಧ್ಯಕ್ಷ ಮೋಹನ್ ರೆಡ್ಡಿ ಬೆಂಗಳೂರು : ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಅಕ್ರಮಗಳು ನಿಲಿಸಿ ಎಂದು ವಿಭವ ಕರ್ನಾಟಕ ಭೂ ರಕ್ಷಣಾ ವೇದಿಕೆ ಅಧ್ಯಕ್ಷ ಮೋಹನ್ ರೆಡ್ಡಿ ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಇ-ಪ್ರಕ್ಯೂರಿಮೆಂಟ್ ವಿದ್ಯುತ್ ಕಾಮಗಾರಿಗಳ ಸಾರ್ವಜನಿಕ ಕಂದಾಯದ ಹಣವನ್ನು ಲೂಟಿ ಮಾಡಿರುವ ಭ್ರಷ್ಟ ಅಧಿಕಾರಿ ಮತ್ತು ಗುತ್ತಿಗೆದಾರ ವಿರುದ್ಧ ಕ್ರಿಮಿನಲ್ ಮೊಕದಮ್ಮ ದಾಖಲು ಮಾಡುವಂತೆ ವೇದಿಕೆಯ ಕಾರ್ಯದರ್ಶಿ ಜಘನಾಥ್ ರೆಡ್ಡಿ ಡೈಮಂಡ್ ಮಾಡಿದರು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸೌಮ್ಯದ ಕೆ.ಐ.ಎ.ಡಿ.ಬಿ ಇಲಾಖೆಯ ಮೂಲ ಸೌಲಭ್ಯಗಳ ಭಾಗವಾದ ವಿದ್ಯುತ್ ಇ- ಪ್ರಕ್ಯೂರಿಮೆಂಟ್ ಟೆಂಡರ್‌ಗಳ ಕಾಮಗಾರಿಗಳಲ್ಲಿ ಮಾನ್ಯ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಯ ನಿರ್ಲಕ್ಷ ಹಾಗೂ ಅಧಿಕಾರದ ದುರುಪಯೋಗದಿಂದ ಬಹು ಕೋಟಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣ ಕೋಟಿಗಟ್ಟಲೆ ಲೂಟಿ ಮಾಡಿರುವುದು ಈ ರಾಜ್ಯದ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಮಾಡಿರುವ ಬಹುದೊಡ್ಡ ದ್ರೋಹ ಮತ್ತು ಖಂಡನೀಯ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 2022-2023 ನೇ ಸಾಲಿನಲ್ಲಿ ನಕಲಿ ಲೈಸನ್ಸ್ ಮತ್ತು ಬ್ಯಾಂಕ್ ಎಫ್.ಡಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಅನರ್ಹ ಗುತ್ತಿಗೆದಾರರಾದ ಮೆ/ಗೀತಾ ಎಲೆಕ್ಟ್ರಾನಿಕ್ಸ್ ಮೆ/ಕುಮಾರ್ ಎಲೆಕ್ಟ್ರಾನಿಕ್ಸ್ . ಮೆ/ಅರವಿಂದ್ ಎಲೆಕ್ಟ್ರಾನಿಕ್ಸ್ ಅವರಿಗೆ ಆಕ್ರಮವಾಗಿ ಟೆಂಡರ್ ಹಂಚಿಕೆ ಮಾಡಿದ್ದು ಅಲ್ಲದೇ ಸದರಿ ಟೆಂಡರ್‌ಗಳನ್ನು ದುಪ್ಪಟ್ಟು ಅಂದಾಜು ಪಟ್ಟಿ ತಯಾರಿಸಿ ಅತಿ ಹೆಚ್ಚುವರಿ ದರಗಳಿಗೆ ತರಾತುರಿಯಲ್ಲಿ ಟೆಂಡ‌ರ್ ಪ್ರಕ್ರಿಯೆ ನಡೆಸಿ ನೀತಿ ಸಂಹಿತೆ ಜಾರಿಗೆ ಮುನ್ನವೇ ಕಾರ್ಯದೇಶ ನೀಡಿದ್ದು ಕೆ.ಟಿ.ಟಿ.ಪಿ ಕಾಯ್ದೆ ಉಲ್ಲಂಘನೆಯಾಗಿರುತ್ತದೆ. …
ಸದರಿ ಎಲ್ಲಾ ಟೆಂಡರ್ • ಕಾಮಗಾರಿಗಳನ್ನು ರದ್ದುಪಡಿಸಿ ಸರ್ಕಾರದ ಸುತ್ತೋಲೆ ಸಂಖ್ಯೆ ಆಇ/262 ವೆಚ್ಚ/2/2022 ದಿನಾಂಕ : 11.05.2022 ರಂತೆ ಹಾಗೂ ಕೆ.ಐ.ಎ.ಡಿ.ಬಿ ವತಿಯಿಂದ ನಿರ್ವಹಿಸಿರುವ 2012 2013 ರಿಂದ 2018 – 2023 ರವರೆಗಿನ ಅನೇಕ ಮತ್ತು ಸುಮಾರು, 400 ಕೋಟಿ ವಿದ್ಯುತ್ ಕಾಮಗಾರಿಗಳಲ್ಲಾದm ವ್ಯವಹಾರದ ಬಗ್ಗೆ ದಾಖಲೆಗಳಿದ್ದು ಗುಣಮಟ್ಟವಿಲ್ಲದ ಕಾಮಗಾರಿಗೆ ಛಾಯಾಚಿತ್ರಗಳಿದ್ದು ಸೃಷ್ಟಿ ಮಾಡಿ ಕೊಂದಿರುವ ನಕಲಿ ದಾಖಲೆಗಳಿದ್ದು ಈ ಭ್ರಷ್ಟಾಚಾರ ತನಿಖೆಗೆ ಉನ್ನತ ಅಧಿಕಾರಿಗಳ ಸಹಯೋಗದಲ್ಲಿ ಸಮಗ್ರ ತನಿಖೆ ಮಾಡಲು ವಿಶೇಷ ತನಿಖಾ ಸಮ್ಮದಿಯನ್ನು ರಚಿಸಬೇಕೆಂದು ಮತ್ತು ಎಲ್ಲಾ ಅನರ್ಹ ಗುತ್ತಿಗೆದಾರರ ಇ.ಎಂ.ದಿ ಮತ್ತು ಎಫ್ ಎಸ್ ಸಿ ಮುತ್ತುಗೋಲು ಹಾಕಬೇಕೆಂದು ಹಾಗೂ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಮೇಲ್ಕಂಡ ಗುತ್ತಿಗೆದಾರರಿಗೆ ನೀಡಿರುವ ಟೆಂಡರ್‌ಗಳ ಆದೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು . ಪಾರಥರ್ಶಕ ವಾದ ತನಿಖೆ ಮಾಡಲು ಮೇಲ್ಕಂಡ ಗುತ್ತಿಗೆದಾರರ ಮೇಲೆ ಎಫ್.ಐ.ಆರ್ ದಾಖಲಾಗ ಬೇಕೆಂದು ಮತ್ತು ಅಧಿಕಾರಿಗಳನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಲು ಒತ್ತಾಯಿಸಲು ಉನ್ನತ ಅಧಿಕಾರಿಗಳ ಮತ್ತು ಎಲ್ಲಾ ಅನರ್ಹ ಗುತ್ತಿಗೆದಾರರ ಇ.ಎಂ.ದಿ ಮತ್ತು ಎಫ್ .ಎಸ್.ಸಿಮತ್ತು ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಮೇಲ್ಕಂಡ ಗುತ್ತಿಗೆಗಾರರಿಗೆ ನೀಡಿರುವ ತೊಂದರೆಗಳ ಕಾರ್ಯ ಆದೇಶವನ್ನು ರದ್ದು ಪಡಿಸಬೇಕು ಪಾರದರ್ಶಕವಾದ ತನಿಖೆ ಮಾಡಲು ಮೇಲ್ಕಂಡ ಗುತ್ತಿಗೆದಾರ ಮೇಲೆ ಕ್ರಿಮಿನಲ್ ಮೊಕದಮ್ಮ ದಾಖಲು ಮಾಡುವಂತೆ ಹಾಗೂ ಈ ಸದರಿ ಕಾಮಗಾರಿಗಳಿಗೆ ಬಳಸಿಕೊಂಡಿರುವ ಅನುಧಾನವನ್ನ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮ ಸಂಸ್ಥೆಯು ಒತ್ತಾಯಿಸುತ್ತದೆ. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button