71 ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚುವಂತೆ, ಪಾದರಸದಂತೆ ಇರುವ ಸಂಗೊಳ್ಳಿ ನಾಗಣ್ಣ. ಎ. ಇವರನ್ನು ಬೆಂಬಲಿಸೋಣ ಬನ್ನಿ.

71 ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚುವಂತೆ ಪಾದರಸದಂತೆ ಇರುವ ಶ್ರೀ ಸಂಗೊಳ್ಳಿ ನಾಗಣ್ಣ. ಎ. ಇವರನ್ನು ಬೆಂಬಲಿಸೋಣ ಬನ್ನಿ. ಚಿಕ್ಕ ವಯಸ್ಸಿನಲ್ಲಿಯೇ ವಕೀಲಿ ವೃತ್ತಿಯನ್ನು ಹಮ್ಮಿಕೊಂಡು ಕಲಬುರಗಿ ಜಿಲ್ಲೆಯ ಹಲವಾರು ಸ್ತರದ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಾ ಸದ್ಯ ಕಲಬುರ್ಗಿ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿ ಹಲವಾರು ಪ್ರಕರಣಗಳನ್ನು ನಡೆಸುತ್ತಿರುವ ಶ್ರೀ ಸಂಗೊಳ್ಳಿ ರಾಯಣ್ಣ ಇವರು ತಮ್ಮ ಇಳಿ ವಯಸ್ಸಿನಲ್ಲಿ ತಮಗಾಗಿ ಅಲ್ಲದೇ ಮುಂದಿನ ಯುವ ಪೀಳಿಗೆಯ, ಯುವ ಪ್ರತಿಭೆ ವಕೀಲರಿಗೆ ಅನುಕೂಲವಾಗಬೇಕು ಎಂದು ಶಪಥಪಟ್ಟು ಕರ್ನಾಟಕ ರಾಜ್ಯ ವಕೀಲರ ಮಂಡಳಿ 2026 ಚುನಾವಣೆಯಲ್ಲಿ ಸದಸ್ಯತ್ವಕ್ಕೆ ಸ್ಪರ್ಧೆ ಮಾಡಿದ್ದಾರೆ. ಅವರ ಆಸೆ ಆಕಾಂಕ್ಷೆಯ ಗುರಿ ಒಂದೇ ಒಂದು ಅದೇನೆಂದರೆ ವಕೀಲರ ಕಲ್ಯಾಣಕ್ಕಾಗಿ ಆಹೋರಾತ್ರಿ ಹೋರಾಡುವುದು ಮತ್ತು ಸೌಲಭ್ಯಗಳನ್ನು ದೊರಕಿಸಿಕೊಡುವುಡು ಅವರ ಗುರಿ ಮತ್ತು ಇವರ ಅಪೇಕ್ಷೆ, ಆಸೆಯಾಗಿದೆ ಇವರು ಚುನಾವಣೆಯಲ್ಲಿ ಆಯ್ಕೆಯಾದ ನಂತರ ವಕೀಲರ ಮಂಡಳಿ ಜೊತೆಗೆ ಯುವ ವಕೀಲರಿಗಾಗಿ ಭವಿಷ್ಯದಲ್ಲಿ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡಲು ಸಿದ್ದರಾಗಿದ್ದಾರೆ.
ಶ್ರೀ ಸಂಗೊಳ್ಳಿ ನಾಗಣ್ಣ. ಎ. ವಕೀಲರು. ಇವರು ವಕೀಲರಿಗಾಗಿ ವಕೀಲರ ಕ್ಷೇಮಾಭಿವೃದ್ಧಿಗಾಗಿ ಹಲವಾರು ಕಲ್ಯಾಣ ಕಾರ್ಯಗಳನ್ನು ಹಂಮಿಕೊಂಡಿದ್ದಾರೆ. ಅವುಗಳೆಂದರೆ……
(1) ವಕೀಲರ ಕಲ್ಯಾಣ ನಿಧಿ 25 ಲಕ್ಷಕ್ಕೆ ವಯಸ್ಸಿನ ಭೇದವಿಲ್ಲದೆ ಹೆಚ್ಚಿಗೆ ಮಾಡಬೇಕು.
. 2) ಬೆಂಗಳೂರಿನಲ್ಲಿ ವಕೀಲರ ಕೃಪಾ ಅತಿಥಿ ಗ್ರಹ ನಿರ್ಮಾಣವಾಗಬೇಕು
(3) ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ವಕೀಲರಿಗಾಗಿ ವಸತಿ ನಿವೇಶನಗಳನ್ನು ಪಡೆದುಕೊಳ್ಳಲು ಸರಕಾರದ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು.
(4) ವಕೀಲರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಹೆಚ್ಚಾಗಬೇಕು. ತತಕ್ಷಣ ಕಾರ್ಯಗತವಾಗಬೇಕು
(5) ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಫ್ರೀ ಸಂಚಾರದ ಸೌಲಭ್ಯ ಸಿಗಬೇಕು
(6) ವಕೀಲ ಸಮುದಾಯದ ಒಬ್ಬ ಎಂ.ಎಲ್. ಸಿ. ಮತ್ತು ರಾಜ್ಯಸಭಾ ಸದಸ್ಯ ಕೋಟ ಕಾಯ್ದಿರಿಸಬೇಕು
(7) A. I. B. E. ಪರೀಕ್ಷಾ ಕೇಂದ್ರ ಕಲ್ಯಾಣ ಕರ್ನಾಟಕದಲ್ಲಿ ನಡೆಯಲು ವ್ಯವಸ್ಥೆ ಮಾಡಬೇಕು. ಮಾರ್ಮಿಕವಾದ ಇವರ ಗುರಿ ಒಳ್ಳೆಯ ಪ್ರಯತ್ನ ಹೊಂದಿರುವ ಶ್ರೀ ಸಂಗೊಳ್ಳಿ ನಾಗಣ್ಣ. ಎ. ವಕೀಲರು ಕಲಬುರ್ಗಿ ಇವರು ಚುನಾವಣೆಯಲ್ಲಿ ಆಯ್ಕೆಯಾಗಲಿ. ಸಾದುದ್ದೇಶದ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ಶ್ರೀ ಸಂಗೊಳ್ಳಿ ನಾಗಣ್ಣ ವಕೀಲರಿಗೆ ಆ ದೇವರು ಕರುಣಿಸಲಿ ಎಂದು ನಾವೆಲ್ಲ ಹರಿಸಿ ಹಾರಿಸೋಣ ಬನ್ನಿ. ನಮ್ಮ ಒಂದು ವೋಟು ಪ್ರಾಮಾಣಿಕವಾಗಿ ಇವರಿಗೆ ಹಾಕಿ ಪ್ರಚಂಡ ಬಹುಮತದಿಂದ ಗೆಲ್ಲಿಸೋಣ ಬನ್ನಿ ಮಿತ್ರರೇ





