ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ.Goutam Yadav.
ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ
ಕನಕಗಿರಿ ತಾಲೂಕಿನ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿಯಲ್ಲಿ ಹೊರ ಮತ್ತು ಒಳರೋಗಿಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದ್ದು, ಪ್ರಸ್ತುತ ಇರುವ ವೈದ್ಯಾಧಿಕಾರಿಗಳು/ಸಿಬ್ಬಂದಿಗಳ ಮೇಲೆ ಕಾರ್ಯದೊತ್ತಡ ಹೆಚ್ಚಾಗಿರುತ್ತದೆ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು/ಸಿಬ್ಬಂದಿಗಳ ಕೊರತೆಯಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆ ಉಂಟಾಗುತ್ತಿದೆ ಎಂದು Dr G ಸತೀಶ್ ತಿಳಿಸಿದರು.
ಮತ್ತು ಮುಂದುವರೆದು, ಸದರಿ ಆಸ್ಪತ್ರೆಯು 30 ಆಸಿಗೆಯ ಸಮುದಾಯ ಆರೋಗ್ಯ ಕೇಂದ್ರವಾಗಿದ್ದು ತಾಲೂಕಿನ ಪೌಷ್ಠಿಕ ಪುನಚೇತನ ಕೇಂದ್ರವಾಗಿ ಕಾರ್ಯನಿರ್ವಸುತ್ತಿರುತ್ತದೆ. ಆದರೆ ಸೂಕ್ತ ತಜ್ಞ ವೈದ್ಯರು/ವೈದ್ಯಾಧಿಕಾರಿಗಳು ಮತ್ತು ಶುಶೂಷ ಅಧಿಕಾರಿಗಳು ಕೊರತೆ ಇದ್ದು ರೋಗಿಗಳಿಗೆ ಮುಕ್ತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಈ ಕಾರಣ ಮೇಲಿನ ವೈದ್ಯರ ಮತ್ತು ಇತರೆ ಸಿಬ್ಬಂದಿಗಳ ಕೊರತೆಯನ್ನು ನೇಮಕ ಮಾಡಿ ಅಥಾವ ನೀಯೊಜನೆ ಮೂಲಕ ಪರಿಹಿರಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೋರಲಾಗಿದೆ ಎಂದು Dr G, ಸತೀಶ್ ತಿಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



