ಸುದ್ಧಿ
ಕರ್ನಾಟಕದ ಕುಳ್ಳ.ಕನ್ನಡ ಚಲನಚಿತ್ರರಂಗದ ಅಜರಾಮರ ದೊರೆ ಇನ್ನಿಲ್ಲ.
ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು‘ಪ್ರಚಂಡ ಕುಳ್ಳ’, ಸ್ಯಾಂಡಲ್ ವುಡ್ ನ ‘ಆಪ್ತಮಿತ್ರ’ ದ್ವಾರಕೀಶ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ತಮ್ಮ ಗಿಡ್ಡತನಕ್ಕೆ ಎಂದೂ ಮರುಗದೆ, ಅದನ್ನೇ ಬಂಡವಾಳ ಮಾಡಿಕೊಂಡು ‘ಕರುನಾಡಿನ ಕುಳ್ಳ’ ಎಂದೇ ಪ್ರಖ್ಯಾತರಾದರು. ನಿರ್ಮಾಪಕ, ನಿರ್ದೇಶಕರಾಗಿಯೂ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಮೃತರ ಆತ್ಮಕ್ಕೆ ಚಿರಶಾಂತಿ, ಅಭಿಮಾನಿಗಳಿಗೆ ಮತ್ತು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.



