ಯ್ಯೂಟ್ಯೂಬ್ ಛಾನೆಲ್ ಮಾಧ್ಯಮದಿಂದ ಪ್ರೆಸ್ ಕಾಡ್೯ ವಿತರಿಸಬಹುದೇ?

ಯ್ಯೂಟ್ಯೂಬ್ ಛಾನೆಲ್ ಮಾಧ್ಯಮದಿಂದ ಪ್ರೆಸ್ ಕಾಡ್೯ ವಿತರಿಸಬಹುದೇ?
ಇಂದಿನ ದಿನಗಳಲ್ಲಿ ಡಿಜಿಟಲ್ ಮಿಡಿಯಾ ಅದೇಷ್ಟು ಜನಪ್ರೀಯವಾಗುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ. ಕೇಂದ್ರ ಸಕಾ೯ರ ವಾತಾ೯ ಮತ್ತು ಸೂಚನಾ ಇಲಾಖೆ ಯ್ಯೂಟ್ಯೂಬ್ ಮಾಧ್ಯಮಕ್ಕೆ ನಿಯಂತ್ರಣ ಹಾಕಲು ಯೋಚಿಸುತ್ತಿದೆ. ವೆಬ್ಸೈಟ್ ತೆಗೆದು ಹಾಕಲು ತಯಾರಿ ನಡೆಸಿದೆ. ಇಲಾಕೆ ಹಲವಾರು ಕಠಿಣ ನಿಯಮಗಳು ಜಾರಿ ಮಾಡುತ್ತಿದ್ದಾರೆ. ಮುಂದೇ ಏನು? ಈ ಥರಹದ ಏನಾದರೊಂದು ಹೊಸ ಸೂಚನೆಗಳು ದಿನ ಬೆಳಗಾದರೇ ವಾಟ್ಸ್ ಅಪ್, ಫೇಸ್ ಬುಕ್ನಲ್ಲಿ ದಿಗಿಲು ಬೀಳುವ ಸುದ್ದಿಗಳು ಹರಡಿಸುತ್ತಿರುವುದು ನೋಡುತ್ತೇವೆ. ಈ ತಳಬುಡವಿಲ್ಲದ ಸುದ್ಧಿಗಳು ಕಂಡು ಯ್ಯೂಟ್ಯೂಬ್ ಮತ್ತು ವೆಬ್ಸೈಟ್ನಲ್ಲಿ ಕಾಯ೯ನಿವ೯ಹಿಸುವ ಮಾಧ್ಯಮ ಮಿತ್ರರು ದಿಗಿಲು ಬೀಳುವಂಥಾಗುತ್ತಿದೆ. ಆತಂಕಕ್ಕೆ ಒಳಗಾಗುತ್ತಿದ್ದಾರೆ. ತಮ್ಮ ಸ್ಥಿತಿ ಮುಂದೇನು? ಅಧೋಗತಿಯೇ? ಎಂದು ತಲೆ ಮೇಲೆ
ಕೈ ಹೊತ್ತು ಕುಳಿತುಕೊಳ್ಳುವಂತಾಗುತ್ತಿದೆ. ಚಿಂತಿತರಾಗಿ ಇದ್ದ – ಬಿದ್ದ ಪರಿಣಿತರಲ್ಲಿ, ಸಹೋದ್ಯೋಗಿಗಳಿಗೆ ಫೋನಾಯಿಸಿ ವಿಚಾರಿಸುವುದೇ ದೈನಂದಿನ ಕಾಯ೯ ಮಾಡಿಕೊಳ್ಳುತ್ತಿದ್ದಾರೆ. ನಮ್ಮ “ ಪ್ರಜಾಶ್ರೀ ಪತ್ರಿಕಾ ಮಾಹಿತಿ ” ಕೇಂದ್ರಕ್ಕೂ ಹಲವಾರು ಯ್ಯೂಟ್ಯೂಬ್ ಹಾಗೂ ವೆಬ್ ಸೈಟ್ ನಿವಾ೯ಹಕರು ಫೋನಾಯಿಸಿ ವಿಚಾರಿಸುತ್ತಿದ್ದಾರೆ.
ಹಲವಾರು ಜನರ ಒಂದೇ ಪ್ರಶ್ನೆ ಏನೆಂದರೆ? ನಮ್ಮ ಯ್ಯೂಟ್ಯೂಬ್ ಅಥವಾ ವೆಬ್ ಸೈಟ್ ಮಾಧ್ಯಮದಿಂದ ಪ್ರೆಸ್ ಕಾಡ್೯ ವಿತರಿಸಬಹುದೇ? ಕಾನೂನು ಉಲ್ಲಂಘನೆಯಾಗುತ್ತದೆಯೇ ?
ಮೇಲಿನ ಪ್ರಶ್ನೆಗೆ ಒಂದೇ ಉತ್ತರವೆನೆಂದರೆ? ಡಿಜಿಟಲ್ ಮಿಡಿಯಾದ ಯ್ಯೂಟ್ಯೂಬ್ ಯಾ ವೆಬ್ಸೈಟ್ ಕೆಲಸ ಮಾಡುತ್ತಿರುವ ವರದಿಗಾರರು ತಮ್ಮ ಪ್ರದೇಶದಿಂದ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಯ್ಯೂಟ್ಯೂಬ್ ಯಾ ವೆಬ್ಸೈಟ್ ಮಾಧ್ಯಮ ಕೇಂದ್ರಗಳಿಗೆ ಕಳುಹಿಸುತ್ತಾರೆ. ಅಂಥಹ ಸಾಮಾಜಿಕ ಸಮಸ್ಯೆಗಳ ವಿಷಯವನ್ನು ಆಯಾ ಸಂಸ್ಥೆಯವರು ತಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ಕಾಯ೯ ನಿವ೯ಹಿಸಲು ತಮ್ಮ ಸಂಸ್ಥೆಯಿಂದ ಹಲವಾರು ಉತ್ಸಾಹಿ ಯುವಕರು ಸ್ಪಾಟ್ ನಲ್ಲಿ ವಿಷಯ ಸಂಗ್ರಹಕ್ಕೆ ಹೋಗುವಾಗ ಅವರು ಸಾವ೯ಜನಿಕರಲ್ಲಿ ತಮ್ಮ ಪರಿಚಯ ಮಾಡಿಕೊಳ್ಳಲು ಪ್ರೆಸ್ ಕಾಡ್೯ ಅವಶ್ಯಕವಾಗಿ ಬೇಕಾಗುತ್ತದೆ. ಆದರೇ, ಉತ್ತರ ಕನಾ೯ಟಕದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಯ್ಯೂಟ್ಯೂಬ್ ಯಾ ವೆಬ್ ಸೈಟ್ ಪತ್ರಕತ೯ರ ಹಾವಳಿ ಹೆಚ್ಚಾಗಿದೆ. ಇಂಥಹವರನ್ನು ಗುರುತಿಸಿ ಕಾನೂನು ಪ್ರಕ್ರಿಯೇಗೆ ಒಳಪಡಿಸಬೇಕು. ಇಂಥಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಾವ೯ಜನಿಕವಾಗಿ ಹೇಳಿದರುವುದು ಹಲವಾರು ರಾಜ್ಯ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಸುದ್ಧಿ ಬರುತ್ತಿದೆ.
ಡಿಜಿಟಲ್ ಮಿಡಿಯಾದ ವೆಬ್ಸೈಟ್ ಯಾ ಯ್ಯೂಟ್ಯೂಬ್ ಪ್ರಸರಣ ಸಂಸ್ಥೆಗಳ ನಿಯಂತ್ರಣಕ್ಕೆ ನಮ್ಮ ದ|ೇಶದಲ್ಲಿ ಇಲ್ಲಿಯವರೆಗೂ ಯಾವುದೇ ತರಹದ ಕಾನೂನು ರಚನೆ ಆಗಿರುವುದಿಲ್ಲ. ಮತ್ತು ಅಂಥಹ ಕಾನೂನುಗಳು ಜಾರಿಗೆ ಬಂದಿರುವುದಿಲ್ಲ, ಕಾರಣ ಇಂಥಹ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವರದಿಗಾರರು ವರದಿ ಸಂಗ್ರಹಿಸಲು ಛಾಯಾ ಚಿತ್ರಣ ಮಾಡಿಕೊಳ್ಳಲು ಸಕ್ರೀಯರಾದಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಿನ ಬೆಳಗಾದರೆ ನೂರಾರು ಇಂಥಹ ಸಂಸ್ಥೆಗಳು ಹಲವಾರು ಹೆಸರಿನೊಂದಿಗೆ ಹುಟ್ಟಿಕೊಂಡು ಕಾಯ೯ನಿವ೯ಸುತ್ತಿವೆ. ತುಂಬಾ ಒಳ್ಳೊಳ್ಳೆಯ ಸುದ್ದಿಗಳು ಆಯಾ ಪ್ರದೇಶದಲ್ಲಿ ಪ್ರಸಾರವಾಗಿ ತಾಲೂಕು, ಜಿಲ್ಲಾಡಳಿತದ ಕಣ್ತರೆಯಿಸುತ್ತಿದ್ದಾರೆ. ಖೇದದ ವಿಷಯವೆಂದರೆ ಇಂಥಹ ಸಕ್ರೀಯರಾಗಿ ಕಾಯ೯ನಿವ೯ಸುವ ವರದಿಗಾರರಿಗೆ ಸರಿಯಾದ ಮತ್ತು ಮಾನ್ಯತೆ ಹೊಂದಿದ ಪ್ಲಾಟ್ ಫಾರಂ ಇಲ್ಲದೇ ನರಳುವಂತಾಗಿದೆ. ಇಂಥಹ ಮಾಧ್ಯಮಗಳಿಗೆ ಸೊಶಿಯಲ್ ಮಿಡಿಯಾ ಎಂದೇ ಪರಿಗಣಿಸಿ ಗೌಣವಾಗಿ ನೋಡುತ್ತಿದ್ದಾರೆ. ಪೊಲೀಸ್ ರಕ್ಷಣೆ ಸರಿಯಾಗಿ ಸಿಕ್ಕುತ್ತಿಲ್ಲ. ರಾಜ್ಯ ಮತ್ತು ಕೇಂದ್ರದ ಹಲವಾರು ಟಿ.ವಿ.ಛಾನೆಲ್ನ ವರದಿಗಾರರು “ ನೀವು ಈ ಥರಹ ಕಾನೂನು ಬಾಹಿರವಾಗಿ ಕೆಲಸ ಮಾಡಬಾರದು ಅಪರಾಧವಾಗುತ್ತದೆ ” ಎಂದು ಮೂದಲಿಸುವುದು ಉಂಟು.
ಇಂಥಹ ಯ್ಯೂಟ್ಯೂಬ್ ಯಾ ವೆಬ್ಸೈಟ್ ಸುದ್ದಿ ಮಾಧ್ಯಮದವರು ಮಾನ್ಯತೆ ಹೊಂದಬೇಕಾದರೇ ಒಂದನೇಯದಾಗಿ ಕಂಪನಿ ಯಾ ಪ್ರೊಪ್ರಾಯಿಟರ್ಸ್ ಯಾ ಪಾಟ೯ನರ್ಶಿಪ್ ನೋಂದಣಿ ಮಾಡಿಸಿ ಸಕಾ೯ರದಿಂದ ಮನ್ನಣೆ ಪಡೆದ ಒಂದು ದಾಖಲೆ ಇಟ್ಟುಕೊಳ್ಳಬೇಕು. ಇವು ಕಂಪನಿ ರಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೇ ಪೂಣ೯ವಾದ ನಂತರ ನಿವು “ ಉದ್ಯೋಗ ಆಧಾರದಡಿಯಲ್ಲಿ ಮಾನ್ಯತೆ ಹೊಂದುತ್ತಿರಿ ” ಈ ರೀತಿಯ ನೋಂದಣಿ ನಿಮ್ಮ ಹೆಸರಿನಿಂದಲಾದರೂ ನೋಂದಣಿ ಮಾಡಿಸಿಕೊಳ್ಳಬಹುದು. ಅದಕ್ಕಿಂತಲೂ ಮೇಲೆ ತಿಳಿಸಿದ ಕಂಪನಿಯ ಹೆಸರಿನಿಂದಲೇ ನೋಂದಣಿ ಮಾಡಿಸುವುದು ಹೆಚ್ಚು ಸೂಕ್ತ. ಯಾವಾಗ ನೀವು ಉದ್ಯೋಗ ಆಧಾರದಡಿಯಲ್ಲಿ ನೋಂದಣಿ ಮಾಡಿದ ಕಂಪನಿಯ ವಿಭಾಗದಲ್ಲಿ ಸುದ್ಧಿ ಸಮಾಚಾರ ಸಂಗ್ರಹಣೆ ಕೆಟಗರಿಯಲ್ಲಿ ಸುದ್ಧಿ ಸಮಾಚಾರ ಸಾಂಗ್ರಹಣೆ ಕೆಟಗರಿಯಲ್ಲಿ ಈ ಯ್ಯೂಟ್ಯೂಬ್ ವೆಬ್ಸೈಟ್ ಛಾನೆಲ್ ಮುಖಾಂತರ ಸುದ್ದಿ ಸಂಗ್ರಹಿಸಿ ಸೋಶಿಯಲ್ ಅವೇರ್ನೆಸ್ ಮಾಡುತ್ತಿದ್ದೆವೆ ಎಂದು ವಾದಿಸಬಹುದು.
ಆದೆರೇ ಮುಖ್ಯ ಪ್ರಶ್ನೆಯೊಂದು ಇಲ್ಲಿ ಉದ್ಬವಿಸುತ್ತದೆಮ ಅದೆಂದರೆ ಮಿಡಿಯಾ ನೋಂದಣಿ ಕೇವಲ ಎರಡೇ ಎರಡು ಇಲಾಖೆಗಳಲ್ಲಿ ನೋಂದಣಿ ಆಗುತ್ತದೆ. ಅಲ್ಲಿ ಮಾಡಿಸಿದ ನೋಂದಣಿ ಮಾತ್ರ ಕಾನೂನು ಪ್ರಕಾರ ಊಜೀ೯ತವೆನ್ನಿಸುತ್ತದೆ ಅವುಗಳೆಂದರೆ ಮುದ್ರಣ ಮಾಧ್ಯಮ ಯಾ ಪ್ರಿಂಟ್ ಮಿಡಿಯಾ ಭಾರತ ಸಕಾ೯ರದಡಿಯಲ್ಲಿ ಕಾಯ೯ನಿವ೯ಸುವ ಆರ್.ಎನ್.ಐ.. ಇಲಾಖೆಯಿಂದ ನೋಂದಣಿಯಾಗುತ್ತದೆ. ೨ನೇಯದು ಎಲೆಕ್ಟ್ರಾನಿಕ್ಸ್ ಮಿಡಿಯಾ ಇದು ಇನ್ಫಾರ್ಮೆಷನ್ ಅಂಡ್ ಬ್ರೋಡ್ಕಾಂಸ್ಟಿಂಗ್ ಹೊಸದಿಲ್ಲಿ ಕಾಯಾ೯ಲಯದಲ್ಲಿ ನೋಂದಣಿಯಾಗುತ್ತವೆ.
ಇಂಥಹ ಕಾನೂನು ಬದ್ಧ ನೋಂದಣಿ ಇಲಾಖೆಯಲ್ಲಿ ನೋಂದಣಿಯಾಗುವ ಮಾಧ್ಯಮ ಸಂಸ್ಥೆಗಳು ಮಾತ್ರ ಸುದ್ಧಿ ಸಾಂಗ್ರಹಿಸುವ ಮತ್ತು ಪ್ರಸಾರ ಮಾಡುವ ಹಕ್ಕು ಅಧಿಕಾರ ಹೊಂದಿರುತ್ತವೆ. ಅಂಥಹ ನೋಂಧಣಿ ಮಾಧ್ಯಮ ಸಂಸ್ಥೆಗಳು ವಿತರಿಸುವ ಪ್ರೆಸ್ ಐಡಿ ಕಾಡ೯ ಗಳಿಗೆ ಕಾನೂನು ಬದ್ಧ ಮಾನ್ಯತೆ ಇರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಆರ್. ಎನ್. ಐ.ಇಲಾಖೆಯಿಂದಲೂ ಮಾಧ್ಯಮ ನೋಂದಣಿ ಮಾಡಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಯಾಕೆಂದರೆ ಹಲವಾರು ಜನ ಇಂದಿನವರೆಗೂ ಸರಳವಾಗಿ ನಡೆಯುತ್ತಿದ್ದ ಆರ್.ಎನ್.ಐ ಇಲಾಖೆಯಿಂದ ಪತ್ರಿಕಾ ನೋಂದಣಿ ಪ್ರಕ್ರಿಯೇಯನ್ನು ಪೂರೈಸಿಕೊಂಡು ವಿಜಿಟಿಂಗ್ ಕಾಡ್೯ನಲ್ಲಿ ತಮ್ಮ ಪತ್ರಿಕೆಯ ಹೆಸರು ತಮ್ಮ ಹೆಸರು ಹುದ್ದೆ ಮುದ್ರಿಸಿಕೊಂಡು ವಿಸಿಟಿಂಗ್ ಕಾಡ್೯ ಪತ್ರಕತ೯ರ ಹಾವಳಿ ಮಿತಿ ಮೀರಿ ನೈಜ ಪತ್ರಕತ೯ರಿಗೆ ಮೂಲೆಗುಂಪು ಮಾಡಿಬಿಟ್ಟಿದ್ದಾರೆ. ಅಲ್ಲದೇ ಪತ್ರಕತ೯ನಿದ್ದೆನೆ ಎಂದು ಸಾವ೯ಜನಿಕರಿಗೆ ಸಕಾ೯ರಿ ಅಧಿಕಾರಿಗಳಿಗೆ ಬೆದರಿಸುವುದು ರೋಲ್ ಕಾಲ್ ಮಾಡುತ್ತಿದ್ದರು. ಸೋಮಾರಿ ಪತ್ರಕತ೯ರಿಂದ ಆಗುತ್ತಿದ್ದ ಸಾವ೯ಜನಿಕ ತೊಂದರೆ ಯಿಂದ ಹಲವಾರು ಪೊಲೀಸ್ ಕೇಸ್ಗಳು ಆಗುತ್ತಿರುವುದನ್ನು ಮನಗಂಡು ಆರ್.ಎನ್. ಐ ಕಾಯ೯ಲಯದಿಂದ ಪತ್ರಿಕಾ ನೋಂದಣಿ ಪ್ರಕ್ರಿಯೇಯಲ್ಲಿ ಹಲವಾರು ನಿಯಮ ನಿಬಂಧನೆಗಳು ಬಿಗಿಗೊಳಿಸಿದ್ದಾರೆ.
ಸ್ನೇಹಿತರೇ ನೀವು ಡಿಜಿಟಲ್ ಮಿಡಿಯಾ ಸೋಶಿಯಲ್ ಮಿಡಿಯಾದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಉತ್ಸಾಹ, ರೈಟ್ ಟೂ ಕವರೇಜ್ ಮಾಡುವ ಉತ್ಸಾಹಮ ನಿಮ್ಮದಾಗಿದ್ದರೇ ಮಾನ್ಯತೆ ಇಲ್ಲದ ಮಾಧ್ಯಮಗಳಲ್ಲಿ ಶ್ರಮವಹಿಸಿ ದುಡಿದರೂ ಪ್ರತಿಫಲ ಸಿಕ್ಕುತ್ತಿಲ್ಲವೆಂದರೆ ಸೂಕ್ತ ಮಾಗ೯ದಶ೯ನ ಮತ್ತು ತಮ್ಮ ಇಚ್ಚೆಗೆ ಅನುಗುಣವಾದ ಕೆಲಸಕ್ಕಾಗಿ ನಮ್ಮ ʼʼ ಪ್ರಜಾಶ್ರೀ ಪತ್ರಿಕಾ ಮಾಹಿತಿ ʼʼ ನಮ್ಮ ಸಂಸ್ಥೆಗೆ ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿರಿ. ಮೋ. ಸಂಖ್ಯೆ- 9731113141. ಬೆಂಗಳೂರು



