ಸುದ್ಧಿ
ರಾಯಚೂರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಶ್ರೀ ಜಿ ಕುಮಾರ ನಾಯಕರವ
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ‘ಕೃಷಿ ಬೆಳವಣಿಗೆಗೆ ಹೊಸ ದೃಷ್ಟಿಕೋನ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ‘ರಾಯಚೂರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಶ್ರೀ ಜಿ ಕುಮಾರ ನಾಯಕರವರು ಪಾಲ್ಗೊಂಡು,
ಈ ಪ್ರದೇಶದಲ್ಲಿ ಕೃಷಿ ಮಾಡಲು ಸರ್ಕಾರ ನೀಡಿರುವ ಸೌಲಭ್ಯಗಳು, ಕೃಷಿಕರಿಗೆ ಇರುವ ಅವಕಾಶಗಳು ಹಾಗೂ ಸಬ್ಸಿಡಿ ಯೋಜನೆಗಳ ಕುರಿತು ಮಾತನಾಡಿದರು. ಈ ವೇಳೆ ಸಚಿವರಾದ ಶ್ರೀ ಎನ್.ಎಸ್ ಭೋಸರಾಜು, ಜಿಲ್ಲಾಧಿಕಾರಿಗಳಾದ ಶ್ರೀ ನಿತೀಶ್ ಕೆ, ಜಿಲ್ಲಾ ಪಂಚಾಯಿತಿ ಸಿಇಒ ಶ್ರೀ ರಾಹುಲ್ ತುಕಾರಾಂ ಪಾಂಡ್ವೇ, ಕೃಷಿ ವಿವಿ ಕುಲಪತಿಗಳಾದ ಶ್ರೀ ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಶ್ರೀ ಕೆ ಶಾಂತಪ್ಪ, ಶ್ರೀ ಜಯಂತರಾವ್ ಪತಂಗೆ, ಶ್ರೀ ಜಿ ಶಿವಮೂರ್ತಿ, ಶ್ರೀ ಅಮರೇಗೌಡ ಹಂಚಿನಾಳ, ಶ್ರೀ ರುದ್ರಪ್ಪ ಅಂಗಡಿ, ಶ್ರೀ ದೊಡ್ಡಬಸ್ಸಪ್ಪ ಗೌಡ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




