ಶಿಕ್ಷಣವು ಅತ್ಯಮೂಲ್ಯವಾಗಿದೆ ನಮ್ಮ ಭಾರತದಲ್ಲಿ ಎಲ್ಲರಿಗೂ ಅತಿ ಕಡಿಮೆ ಖರ್ಚಿನಲ್ಲಿ ಸಿಗುವಂತಾಗಬೇಕು.

ಬೆಂಗಳೂರು. ಪ್ರಪಂಚದಲ್ಲೇ ಅತ್ಯುತ್ತಮ ವಾದ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ –
ಪ್ರಪಂಚದಲ್ಲೇ ಅತ್ಯುತ್ತಮ ವಾದ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ – ಎ. ಪಿ. ಜ್ಞಾನ ಪ್ರಕಾಶ್
ಸಮಾಜದ ಪ್ರತಿ ಒಬ್ಬರಿಗೂ ಶಿಕ್ಷಣ ಅತ್ಯಮೂಲ್ಯ ವಾಗಿದೆ ನಮ್ಮ ಭಾರದಲ್ಲಿ ಎಲ್ಲಾರಿಗೂ ಸಿಗಬೇಕು ಅತಿ ಕಡಿಮೆ ಖರ್ಚಿನಲ್ಲಿ
ಬೆಂಗಳೂರು. ಪ್ರಪಂಚದಲ್ಲೇ ಅತ್ಯುತ್ತಮ ವಾದ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ – ಎ. ಪಿ. ಜ್ಞಾನ ಪ್ರಕಾಶ್ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿವರಿಸಿದರು. ಸಮಾಜದ ಪ್ರತಿ ಒಬ್ಬರಿಗೂ ಶಿಕ್ಷಣ ಅತ್ಯಮೂಲ್ಯ ವಾಗಿದೆ ನಮ್ಮ ಭಾರದಲ್ಲಿ ಎಲ್ಲಾರಿಗೂ ಸಿಗಬೇಕು ಅತಿ ಕಡಿಮೆ ಖರ್ಚಿನಲ್ಲಿ, ಬಡವರಿಗೆ ತಲುಪುವ ಉದ್ದೇಶದಿಂದ ಈ ಕರ್ನಾಟಕ ರಾಜ್ಯ ಮುಕ್ತ ವಿವಿ(ಕೆಎಸ್ಓಯು)ಯು 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಾರಂಭವಾಗಿರುವ ಕುರಿತು ಪತ್ರಿಕಾ ಗೋಷ್ಠಿ ಯಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮುಕ್ತ ವಿವಿಯು 2026-27ನೇ ಸಾಲಿನ ಜುಲೈ ಆವೃತ್ತಿಗೆ, ಯು ಜಿ ಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪ್ರವೇಶಾತಿಯು ದಿನಾಂಕ 22/06/2026 ರಿಂದ 15/09/2026 ರ ವರೆಗೆ ನಡೆಯಲಿದ್ದು, ಪ್ರವೇಶಾತಿ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಕ.ರಾ.ಮು.ವಿ.ಯ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕ.ರಾ.ಮು.ವಿ.ಯ ಅಧಿಕೃತ ವೆಬ್ಸೈಟ್ www.ksoumysuru.ac.in ನಲ್ಲಿ KSOU Admission portal .ಮೂಲಕ ಆನ್ಲೈನಲ್ಲಿ ಅರ್ಜಿ ಭರ್ತಿ ಮಾಡಿ, ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಂತರ ಆನ್ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ಧ ಪಾಠಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು . ಬಾಪೂಜಿನಗರ ಪ್ರಾದೇಶಿಕ ಕೇಂದ್ರದ ವತಿಯಿಂದ ಕುಲಪತಿಗಳಾದ ಎ ಪಿ ಜ್ಞಾನಪ್ರಕಾಶ್, ರೋಹಿತ್ ಹೆಚ್ ಡೀನ್ ಆದಂತಹ ಎನ್ ಅನಂದ್ ಗೌಡ, ನಂದೀಶ್, ಸುಧಾಕರ್, ರಮಾನಾಥಮ್ ನಾಯ್ಡು. ಮುಂತಾದವರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.





